ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ

ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ

ದಾವಣಗೆರೆ, ಜ.23- ಶತಾಯುಷಿ, ತ್ರಿವಿಧ ದಾಸೋಹಿ, ಮಹಾ ತಪಸ್ವಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯಸ್ಮರಣೆ ಮತ್ತು ಪುಷ್ಪ ನಮನವನ್ನು ಈಶ್ವರ್ ಕಾಂಪ್ಲೆಕ್ಸ್ , ನಿರಂಜನ್ ಪ್ರಿಂಟಿಂಗ್ ಪ್ರೆಸ್ ಆವರಣದಲ್ಲಿ  ವ್ಯಾಪಾರಸ್ಥರು, ಕಾಲೇಜು ವಿದ್ಯಾರ್ಥಿಗಳು, ಭಕ್ತ ಮಹಾಶಯರು ಪಾಲ್ಗೊಂಡು, ಇಂದೂಧರ್ ನಿಶಾನಿಮಠ್ ಅವರ ಅದ್ಯಕ್ಷತೆಯಲ್ಲಿ 4 ನೇ ಪುಣ್ಯ ಸ್ಮರಣೆಯನ್ನು ಆಚರಿಸಿದರು. ಬಂದಂತಹ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು.  ಶ್ರೀ ಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

error: Content is protected !!