ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ : ಯಾದವ ಮಹಾಸಭಾ ಸ್ವಾಗತ

ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ : ಯಾದವ ಮಹಾಸಭಾ ಸ್ವಾಗತ - Janathavaniದಾವಣಗೆರೆ, ಸೆ.28- ರಾಜ್ಯದ ಯಾದವ ಸಮುದಾಯಗಳ ಬಹುದಿನಗಳ ಬೇಡಿಕೆ ಯಾಗಿದ್ದ ಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿ ಸಲು ಪ್ರಾರಂಭಿಸಲು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು ಆದೇಶಿಸಿರುವುದನ್ನು ಜಿಲ್ಲಾ ಯಾದವ ಮಹಾಸಭಾದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಸ್ವಾಗತಿಸಿದ್ದಾರೆ. 

ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದ ಸಂಸದ ಜಿ.ಎಂ.ಸಿದ್ದೇಶ್ವರ ಅವರು, ತಮ್ಮ ಮನವಿ ಪತ್ರದೊಂದಿಗೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದ್ದನ್ನು ಇಲ್ಲಿ ಸ್ಮರಿಸುತ್ತಾ ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ನಿಗಮ ಮಂಡಳಿ ಸಹಕಾರಿಯಾ ಗಿದೆ ಎಂದು ಯಾದವ ಮಹಾಸಭಾದ ಜಿಲ್ಲಾ ಧ್ಯಕ್ಷ ಬಾಡದ ಆನಂದರಾಜ್ ಅಭಿಪ್ರಾಯ ಪಟ್ಟಿದ್ದಾರೆ.  ಕೇಂದ್ರ ಸರ್ಕಾರದ ಅಂಗಳದಲ್ಲಿ ರುವ ಗೊಲ್ಲ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ರಾಜ್ಯ ಸರ್ಕಾರದಿಂದ ಶಿಫಾರಸ್ಸಾಗಿ ರುವ ಪತ್ರ ಇದ್ದು, ತಕ್ಷಣ ಪರಿಶಿಷ್ಟ ಪಂಗಡಕ್ಕೆ ಗೊಲ್ಲ ಸಮಾಜವನ್ನು ಅನುಮೋದಿಸುವಂತೆ ಆನಂದರಾಜ್‌ ಒತ್ತಾಯಿಸಿದ್ದಾರೆ.

error: Content is protected !!