ರಾಮಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಣೆ – ಜ್ಯೋತಿ ಜಾಗೃತಿ ಸಮಾರಂಭ : ಪೇಜಾವರ ಶ್ರೀಗಳಿಗೆ ಆಹ್ವಾನ

ದಾವಣಗೆರೆ, ಸೆ.8- ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಬೆಳ್ಳಿ ಇಟ್ಟಿಗೆ ಸಮ ರ್ಪಣೆ ಹಾಗೂ ಸಾರ್ವಜನಿಕ `ಜ್ಯೋತಿ ಜಾಗೃತಿ’ ಸಮಾರಂಭಕ್ಕೆ ಅಯೋಧ್ಯೆ ರಾಮಮಂದಿರ ಟ್ರಸ್ಟಿ ಆಗಿರುವ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರನ್ನು ಇಂದು ಆಹ್ವಾನಿಸಲಾಯಿತು. 

ಶ್ರೀರಾಮ ಸೇವಾ ಸಮಿತಿ ಹಾಗೂ ಸಕಲ ಹಿಂದೂಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಕಟ್ಟಡಕ್ಕೆ ಸುಮಾರು 15 ಕೆಜಿ ತೂಕದ ಬೆಳ್ಳಿ ಇಟ್ಟಿಗೆ ಸಮರ್ಪಣೆ ಹಾಗೂ ಕಳೆದ  30 ವರ್ಷದ ಹಿಂದೆ  ದಾವಣಗೆರೆಯಲ್ಲಿ ನಡೆದ ಶ್ರೀರಾಮ ಜ್ಯೋತಿ ರಥಯಾತ್ರೆಯ  ಮೆರವಣಿಗೆಯ ಸಂದರ್ಭದಲ್ಲಿ ಉಂಟಾದ ಗಲಭೆಯಲ್ಲಿ ಹುತಾತ್ಮರಾದ ದೇಶಪ್ರೇಮಿ ರಾಮಭಕ್ತರು ಹಾಗೂ ಹಲ್ಲೆಗೊಳಗಾದ ಧರ್ಮ ರಕ್ಷಕರಿಗೆ ಗೌರವ ಸಮರ್ಪಿಸುವ `ಜ್ಯೋತಿ ಜಾಗೃತಿ’ ಸಮಾರಂಭವು ಬರುವ ಅಕ್ಟೋಬರ್ 6ರಂದು ನಡೆಯಲಿದೆ.

ಪೇಜಾವರ ಶ್ರೀಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಗೋಪಾಲರಾವ್ ಮಾನೆ, ನೀಲಗುಂದ ರಾಜು ಇದ್ದರು.

error: Content is protected !!