ಜಿಲ್ಲೆಯಲ್ಲಿ 406 ಪಾಸಿಟಿವ್ 7 ಸಾವು, 238 ಬಿಡುಗಡೆ

ಜಿಲ್ಲೆಯಲ್ಲಿ 406 ಪಾಸಿಟಿವ್ 7 ಸಾವು, 238 ಬಿಡುಗಡೆ - Janathavani

ದಾವಣಗೆರೆ, ಸೆ. 5- ಇದೇ ಮೊದಲ ಬಾರಿ ಜಿಲ್ಲೆಯಲ್ಲಿ ಒಂದೇ ದಿನ 406 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಏಳು ಜನರು ಸಾವನ್ನಪ್ಪಿದ್ದು, 238 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 10977 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, 7986 ಜನರು ಸೋಂಕು ಮುಕ್ತರಾಗಿ ದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2778 ಸಕ್ರಿಯ ಪ್ರಕರಣಗಳಿವೆ.

ದಾವಣಗೆರೆ ತಾಲ್ಲೂಕಿನಲ್ಲಿ 152, ಹರಿಹರ 33, ಜಗಳೂರು 26, ಚನ್ನಗಿರಿ 116, ಹೊನ್ನಾಳಿ 52 ಹಾಗೂ ಹೊರ ಜಿಲ್ಲೆಯ 27 ಜನರಲ್ಲಿ ಸೋಂಕು ಕಾಣಿಸಿದೆ.

ದಾವಣಗೆರೆಯ ಆಂಜನೇಯ ಮಿಲ್ ಕ್ವಾಟ್ರಸ್‌ನ 68 ವರ್ಷದ ಮಹಿಳೆ, ವಿನೋಬನಗರದ 66 ವರ್ಷದ ಮಹಿಳೆ, ಕೆ.ಬಿ. ಬಡಾವಣೆಯ 83 ವರ್ಷದ ವೃದ್ಧೆ, ಬೂದಿಹಾಳ್‌ನ 34 ವರ್ಷದ ಪುರುಷ, ಹರಪನಹಳ್ಳಿ ತಾಲ್ಲೂಕು ಪುಣಬಘಟ್ಟದ 35 ವರ್ಷದ ಪುರುಷ, ನ್ಯಾಮತಿಯ 65 ವರ್ಷದ ಪುರುಷ, ಜಗಳೂರು ತಾಲ್ಲೂಕು ಬಿದರಕೆರೆಯ 60 ವರ್ಷದ ಪುರುಷ ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

error: Content is protected !!