ಪ್ರಾದೇಶಿಕ-ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ; ಸ್ವಾಗತಾರ್ಹ

ಪ್ರಾದೇಶಿಕ-ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ; ಸ್ವಾಗತಾರ್ಹ - Janathavaniದಾವಣಗೆರೆ, ಆ.30- ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪ್ರಾದೇಶಿಕ-ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವ ಕೇಂದ್ರದ ನಿಲುವನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ ಸ್ವಾಗತಿಸಿದ್ದಾರೆ.

ಡಯಟ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡಬೇಕು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೌಶಲ್ಯಾಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿರುವ ಕೇಂದ್ರ ಸರ್ಕಾರo ಕಾರ್ಯ ಶ್ಲಾಘನೀಯ ಎಂದರು. 

ನೂತನ ಶಿಕ್ಷಣ ನೀತಿಯಲ್ಲಿ ಸ್ವಾವಲಂಬನೆಯ ಜೀವನಕ್ಕೆ ಒತ್ತು ನೀಡಿರುವುದು ಅಭಿನಂದನೀಯ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಡಯಟ್‌ ಪ್ರಾಚಾರ್ಯ ಹೆಚ್‌.ಕೆ. ಲಿಂಗರಾಜ್‌, ಜಿ.ಪಂ. ಸದಸ್ಯೆ ಶೈಲಜಾ ಬಸವರಾಜ್, ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್‌.ಬಿ. ರಂಗನಾಥ್‌, ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಶಿಕ್ಷಣ ತಜ್ಞ ಡಾ. ಹೆಚ್‌.ವಿ. ವಾಮದೇವಪ್ಪ, ಪ್ರೊ. ಸಿ.ಹೆಚ್‌. ಮುರಿಗೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!