ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ

ದಾವಣಗೆರೆ, ಆ.23- ಕೊರೊನಾ ವೈರಸ್ ತಡೆಯುವಲ್ಲಿ ಕಳೆದ 4 ತಿಂಗಳಿನಿಂದ ಶ್ರಮಿಸುತ್ತಿರುವ ನಗರದ ಕೊರೊನಾ ವಾರಿಯರ್ಸ್‌ಗಳಿಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಿಂದ ಸನ್ಮಾನಿಸಲಾಯಿತು.

ಸಂಸ್ಥೆ ಚೇರ್ಮನ್ ಡಾ.ಎ.ಎಂ. ಶಿವಕುಮಾರ್, ವೈಸ್ ಚೇರ್ಮನ್ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಅನಿಲ್ ಬಾರೆಂಗಳ್, ಸಹ ಕಾರ್ಯದರ್ಶಿ ಡಿ.ಎಸ್. ಸಾಗರ್, ಖಜಾಂಚಿ ಗೌಡ್ರ ಚನ್ನಬಸಪ್ಪ, ನಿರ್ದೇಶಕರಾದ ಡಿ.ಎಸ್. ಸಿದ್ದಣ್ಣ, ಡಾ. ಎ.ಎಂ. ಶಿಲ್ಪಶ್ರೀ, ಡಿ.ಎನ್. ಶಿವಾನಂದ್ ಹಾಗೂ ಪದಾಧಿಕಾರಿಗಳು ಮತ್ತು ಉಪಸಮಿತಿ ಸದಸ್ಯರು ಭಾಗವಹಿಸಿದ್ದರು.

error: Content is protected !!