ಹದಗೆಟ್ಟ ರಸ್ತೆಯತ್ತ ಅಧಿಕಾರಿಗಳು ಗಮನ ಹರಿಸುವರೇ..

ಮಾನ್ಯರೇ,

ದಾವಣಗೆರೆ 13ನೇ ವಾರ್ಡ್‌ ನಿಟುವಳ್ಳಿ ಹೈಟೆಕ್ ಆಸ್ಪತ್ರೆ ರಸ್ತೆಯ ಕರಿಯಮ್ಮ ದೇವಿ ದೇವಸ್ಥಾನದ ಎದುರಿನ ರಸ್ತೆಯು ಮಳೆ ಬಂದು ಜನಸಾಮಾನ್ಯರು ಓಡಾಡದಂತಹ ದುಸ್ಥಿತಿಯಲ್ಲಿದೆ. ಈಗಾಗಲೇ ಮಕ್ಕಳು, ಹಿರಿಯ ನಾಗರಿಕರು, ವಾಹನ ಸವಾರರು ಮುಗ್ಗರಿಸಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಈ ಕುರಿತು ಸಂಬಂಧ ಪಟ್ಟ ಇಲಾಖೆಯವರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರಸ್ತೆಯ ಸಮಸ್ಯೆಯನ್ನು ಪರಿಹರಿಸಲಿ ಎಂದು ನಮ್ಮ ಮನವಿ.

ಕರಿಯಮ್ಮ ದೇವಿ ದೇವಸ್ಥಾನ ಸೇವಾ ಸಮಿತಿ, ನಿಟುವಳ್ಳಿ.

error: Content is protected !!