ಹರಪನಹಳ್ಳಿ : ಉಜ್ಜಯಿನಿ ಪೀಠದಲ್ಲಿ ಎಂ.ಪಿ.ಲತಾಗೆ ‘ಪ್ರಜಾ ಸಿರಿ’ ಪ್ರಶಸ್ತಿ

ಹರಪನಹಳ್ಳಿ, ಆ.18- ನಮ್ಮ ತಾತ, ನಮ್ಮ ತಂದೆ ಎಂ.ಪಿ.ಪ್ರಕಾಶ್, ಸಹೋದರ ಎಂ.ಪಿ.ರವೀಂದ್ರ ಎಲ್ಲರೂ ಜನ ಸೇವೆಯಲ್ಲಿಯೇ ಖುಷಿ ಕಂಡಿದ್ದಾರೆ. ಶ್ರೀಗಳು ನಮ್ಮ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಪ್ರಶಸ್ತಿ ನೀಡುವುದು ನನಗೆ ಹರ್ಷ ತಂದಿದೆ ಎಂದು ಕೆ.ಪಿ.ಸಿ.ಸಿ. ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಉಜ್ಜಯಿನಿ ಶ್ರೀಪೀಠದಲ್ಲಿ ಶ್ರಾವಣಮಾಸದ ಕಡೆ ಸೋಮವಾರದಂದು ಉಜ್ಜಯಿನಿ ಸದ್ಧರ್ಮ ಪೀಠಾಧ್ಯಕ್ಷರಾದ ಸಿದ್ದಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಶಾಖಾ ಮಾನಿಹಳ್ಳಿ ಪುರವರ್ಗ ಮಠದವತಿಯಿಂದ ಕೊಡಲ್ಪಡುವ `ಪ್ರಜಾ ಸಿರಿ’ ಪ್ರಶಸ್ತಿ ಸ್ವಿಕರಿಸಿದ ನಂತರ ಮಾತನಾಡಿದರು.

ಪ್ರಶಸ್ತಿಯನ್ನು ಶ್ರಾವಣ ಮಾಸದಲ್ಲಿ ಉಜ್ಜಯಿನಿ ಪೀಠದಲ್ಲಿ ನೀಡಿ ನನಗೆ ಗೌರವಿಸಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ. ಇನ್ನೂ ಹೆಚ್ಚಿನ ಸೇವೆ ಮಾಡಲು ಸ್ಫೂರ್ತಿ ಮತ್ತು ಹುಮ್ಮಸ್ಸು ನೀಡಿದೆ. ಮುಂದಿನ ದಿನಗಳಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚು ಜನಪರ ಕೆಲಸ ಮಾಡುವುದಾಗಿ ಅವರು ತಿಳಿಸಿದರು.

ಮಾನಿಹಳ್ಳಿ ಪುರವರ್ಗ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಚಳಗೆರೆ ಹಿರೇಮಠದ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಹೆಚ್.ಎಂ.ಮಲ್ಲಿಕಾರ್ಜುನ್, ಗೌತಮ್ ಇತರರಿದ್ದರು.

error: Content is protected !!