ಭದ್ರಾ ಜಲಾಶಯದಿಂದ ಚಿಕ್ಕಮಗಳೂರು ಜಿಲ್ಲೆಗಳ 192 ಕೆರೆ ತುಂಬಿಸುವ ಯೋಜನೆಗೆ ರೈತರ ವಿರೋಧ

ಮಲೇಬೆನ್ನೂರು, ನ. 14- ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಚಿಕ್ಕಮಗಳೂರು ಜಿಲ್ಲೆಯ 192 ಕೆರೆಗಳಿಗೆ ನೀರು ತುಂಬಿಸುವ ಸರ್ಕಾರದ ಹೊಸ ಯೋಜನೆಗೆ ಮಲೇಬೆನ್ನೂರು ಹೋಬಳಿ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸಚಿವ ಸಂಪುಟದಲ್ಲಿ ಹೊಸ ಯೋಜನೆ ಮಂಜೂರಾತಿಗೆ ಒಪ್ಪಿಗೆ ನೀಡಿ ರುವುದನ್ನು ವಿರೋಧಿಸಿದ ಹೊಳೆಸಿರಿಗೆರೆ ರೈತ ಮುಖಂಡ ಪಾಲಾಕ್ಷಪ್ಪ, ಮಳೆಗಾಲದ ವೇಳೆ ನದಿಯಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಪಂಪ್ ಮೂಲಕ ಹರಸಿ ಕೆರೆ ತುಂಬಿಸಲಿ. ಭದ್ರಾ ಜಲಾಶಯದ ಕೊನೆ ಭಾಗವು ಈಗಲೂ ನಾಲೆ ನೀರಿನಿಂದ ವಂಚಿತವಾಗಿದೆ. ಮಲೆನಾಡಿನ ಕೆರೆಗಳಿಗೆ ಅಣೆಕಟ್ಟಿಯಿಂದ ನೇರವಾಗಿ ನೀರು ಪಂಪ್ ಮಾಡುವುದು ಅವೈಜ್ಞಾನಿಕ. ಈಗ ಜಾರಿಯಲ್ಲಿರುವ ಕೆರೆಗೆ ನೀರು ತುಂಬಿಸುವ ಯೋಜನೆಗಳನ್ನು ಮೊದಲು ಪೂರ್ಣ ಮಾಡಿ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್, ಬೆಸ್ಕಾಂ ನೀರಾವರಿ ನಿಗಮದ ಇಂಜಿನಿಯರ್, ಅಕ್ರಮ ಪಂಪ್ ಸೆಟ್ ತೆರವು ಮಾಡುವ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ ಎಂದು ಆಪಾದಿಸಿದರು.

ಈಗಾಗಲೇ ವಿ.ವಿ.ಸಾಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗೆ ಭದ್ರಾ ಜಲಾಶಯದಿಂದ ನೀರು ಹರಿಸುವ ಯೋಜನೆ ಜಾರಿಯಾಗಿದೆ. ಹೊಸ ಯೋಜನೆ ಅನುಷ್ಠಾನದಿಂದ ದಾವಣಗೆರೆ ಜಿಲ್ಲೆ ಬರದ ನಾಡಾಗಲಿದೆ. ತುಂಗಭದ್ರಾ ನದಿ ಯಿಂದ ಭೈರನಪಾದ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿ ಕೊನೆ ಭಾಗಕ್ಕೆ ನೀರು ಹರಿಸಿ ಎಂದು ಆಗ್ರಹಿಸಿದರು.

ರಾಜಕಾರಣಿಗಳ ಒತ್ತಡದಿಂದ ಕೆರೆ ತುಂಬಿಸುವ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲು ಮುಂದಾದರೆ ಉಗ್ರ ಹೋರಾಟ, ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಕಡಾರನಾಯ್ಕನಹಳ್ಳಿ ಪ್ರಭುಗೌಡ ಎಚ್ಚರಿಸಿದ್ದಾರೆ.

ಮಲೆನಾಡಿನಲ್ಲಿ ನಿರ್ಮಿಸಿದ ಅಣೆಕಟ್ಟಿ ಯಿಂದ ನೀರೆತ್ತುವ ಯೋಜನೆ ಅತ್ಯಂತ ಅಪಾ ಯಕಾರಿ. ಇಂತಹ ಯೋಜನೆ ಜಾರಿಗೊಳಿಸಲು ಬಿಡುವುದಿಲ್ಲ. ಶೀಘ್ರ ಕೊನೆ ಭಾಗದ ರೈತರೊಟ್ಟಿಗೆ ಸಭೆ ನಡೆಸಿ, ತೀರ್ಮಾನಿಸಲಾಗು ವುದು ಎಂದು ಹೇಳಿದರು.

error: Content is protected !!