ಜಗಳೂರಿನಲ್ಲಿ ಐಸಿಎಆರ್ ತರಳಬಾಳು ಕೃಷಿ ಕೇಂದ್ರದಿಂದ ಹತ್ತಿ ಬೆಳೆ ಪ್ರಾತ್ಯಕ್ಷಿಕೆ

ಜಗಳೂರು, ನ.15- ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜಗಳೂರು ತಾಲ್ಲೂಕು ಮರಿಕುಂಟೆ ಗ್ರಾಮದಲ್ಲಿ ಹತ್ತಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು. 

ಈ ಸಂದರ್ಭದಲ್ಲಿ ಕೇಂದ್ರದ ಮಣ್ಣು ವಿಜ್ಞಾನ ವಿಷಯ ತಜ್ಞ ಹೆಚ್.ಎಂ.ಸಣ್ಣ ಗೌಡರು ಮಾತನಾಡಿ, ರೈತರು ಸಮಗ್ರ ಬೆಳೆ ನಿರ್ವಹಣೆ ಕಡೆ ಗಮನ ವಹಿಸಬೇಕೆಂದು ಮನವರಿಕೆ ಮಾಡಿಕೊಟ್ಟರು. 

ಪ್ರಾತ್ಯಕ್ಷಿಕೆ ಅಳವಡಿಸಿಕೊಂಡ ರೈತ ಬಸವರಾಜ್ ಮಾತನಾಡಿ, ಕಾಲಕಾಲಕ್ಕೆ ತಜ್ಞರ ಸಲಹೆ ಅಳವಡಿಸಿಕೊಂಡಿರುವುದರಿಂದ ರೋಗ ಮತ್ತು ಕೀಟದ ಹಾವಳಿ ಕಡಿಮೆಯಾಗಿ ಉತ್ತಮ ಇಳುವರಿ ಬಂದಿರುವುದಾಗಿ ಸಂತಸ ವ್ಯಕ್ತಪಡಿಸಿದರು. 

ರೈತರಿಗೆ ಅಗತ್ಯ ಪರಿಕರಗಳನ್ನು ಈ ಸಂದರ್ಭದಲ್ಲಿ ಒದಗಿಸಲಾಯಿತು. 

ಕೇಂದ್ರದ ಬೇಸಾಯ ತಜ್ಞ ಬಿ.ಓ.ಮಲ್ಲಿ ಕಾರ್ಜುನ್, ಕೊಂಡುಕುರಿ ರೈತ ಉತ್ಪಾದಕ ಕಂಪನಿಯ ಕಾರ್ಯ ನಿರ್ವಹಣಾಧಿಕಾರಿ ರುದ್ರೇಶ್ ಮತ್ತು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!