ಎಸ್.ವಿ.ಆರ್.ಗೆ ಸಚಿವ ಸ್ಥಾನಕ್ಕೆ ಆಗ್ರಹ

ದಾವಣಗೆರೆ, ನ.12- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟದಲ್ಲಿ  ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರಿಗೆ ಸಚಿವ ಸ್ಥಾನ ನೀಡಲು ವಾಲ್ಮೀಕಿ ನಾಯಕ ಸಮಾಜ ಆಗ್ರಹಿಸಿದೆ.

ರಾಮಚಂದ್ರಪ್ಪ ಅವರಿಗೆ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ನೀಡಿ, ವಾಲ್ಮೀಕಿ ನಾಯಕ ಸಮು ದಾಯಕ್ಕೆ ಸಾಮಾಜಿಕ ನ್ಯಾಯ ನೀಡಬೇಕು   ಸಮಾಜದ ಅಧ್ಯಕ್ಷ  ವೀರಣ್ಣ ಒತ್ತಾಯಿಸಿದರು.

ಸಮಾಜದ ಮುಖಂಡ ಎನ್.ಎಂ. ಆಂಜನೇಯ   ಮಾತನಾಡಿ, ಜಿಲ್ಲೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯ ದವರು 3 ಲಕ್ಷ ಮತದಾರರಿದ್ದರೂ ಈವರೆಗೂ ಒಮ್ಮೆಯೂ ಸಚಿವ ಸ್ಥಾನ ನೀಡದಿರುವುದು ನೋವಿನ ಸಂಗತಿ ಎಂದರು.

ಸಮಾಜದ ಮುಖಂಡರಾದ ಐಗೂರು ಹನುಮಂತಪ್ಪ, ಚೇತನ್ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!