ಮಲೆನಾಡಿನಲ್ಲಿ ಮಳೆ : ಭದ್ರೆಗೆ ಒಳಹರಿವು ಹೆಚ್ಚಳ

ಮಲೆನಾಡಿನಲ್ಲಿ ಮಳೆ : ಭದ್ರೆಗೆ ಒಳಹರಿವು ಹೆಚ್ಚಳ - Janathavaniಶಿವಮೊಗ್ಗ,ಆ.3- ಮಲೆನಾಡಿನಲ್ಲಿ ಕ್ಷೀಣಿಸಿದ್ದ ಮಳೆ ಭಾನುವಾರದಿಂದ ಮತ್ತೆ ಪ್ರಾರಂಭವಾಗಿದ್ದು, ಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದೆ.

ಭಾನುವಾರ 1468 ಕ್ಯೂಸೆಕ್ಸ್ ಇದ್ದ ಒಳಹರಿವು ಸೋಮವಾರ 2683 ಕ್ಯೂಸೆಕ್ಸ್‌ಗೆ ಏರಿಕೆಯಾಗಿದ್ದು, ಅಚ್ಚುಕಟ್ಟಿನ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಹವಾಮಾನ ಇಲಾಖೆಯ ಮುಂದಿನ 5 ದಿನಗಳ ಕಾಲ ಮಲೆನಾಡಿನಲ್ಲಿ ಉತ್ತಮ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿರುವುದು ಸಮಾಧಾನದ ವಿಷಯವಾಗಿದೆ.

ಇದರ ಮಧ್ಯೆ ಸೋಮವಾರ ಶಿವಮೊಗ್ಗದಲ್ಲಿ ಮುಖ್ಯ ಇಂಜಿನಿಯರ್ ಸಭೆ ನಡೆಸಿದ್ದಾರೆಂಬ ಮಾತು ಕೇಳಿ ಬಂದಿದ್ದು, ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

error: Content is protected !!