ಕಾಗಿನೆಲೆ ಶ್ರೀಗಳಿಂದ ಶ್ರಾವಣದ ಕೋರಾನ್ಯ ಭಿಕ್ಷೆ

ಮಲೇಬೆನ್ನೂರು, ಆ.3- ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮತ್ತು ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹರಿಹರ ತಾಲ್ಲೂಕಿನಲ್ಲಿ ಶ್ರಾವಣ ಮಾಸದ ಕೋರಾನ್ಯ ಭಿಕ್ಷಾ ಕಾರ್ಯಕ್ರಮವನ್ನು ಕೈಗೊಂಡರು.

ಶಾಸಕ ಎಸ್.ರಾಮಪ್ಪ, ಜಿ.ಪಂ. ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ ಜಗದೀಶ್ ಚೂರಿ ಅವರ ಮನೆಯಿಂದ ಪ್ರಾರಂಭವಾದ ಭಿಕ್ಷಾ ಕಾರ್ಯಕ್ರಮವು ನಂತರ ಬೆಳ್ಳೂಡಿ, ಭಾನುವಳ್ಳಿ, ಜಿಗಳಿ, ಕುಂಬಳೂರು, ಕೊಮಾರನಹಳ್ಳಿ, ಹಾಲಿವಾಣ, ಸಲಗನಹಳ್ಳಿ, ಬನ್ನಿ ಕೋಡು ಗ್ರಾಮಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ 15 ಪ್ಯಾಕೆಟ್ ಅಕ್ಕಿ, 70,050 ರೂ.ಗಳನ್ನು ಭಕ್ತರು ಶ್ರೀಗಳಿಗೆ ಅರ್ಪಿಸಿದರು.

ತಾ. ಕುರುಬ ಸಮಾಜದ ಅಧ್ಯಕ್ಷ ಕೆ.ಜಡಿಯಪ್ಪ, ಮುಖಂಡ ರಾದ ಎಸ್.ಜಿ.ಪರಮೇಶ್ವರಪ್ಪ, ನಂದಿಗಾವಿ ಶ್ರೀನಿವಾಸ್, ವೈ.ಎನ್.ಮಹೇಶ್, ಸುರೇಶ್ ಚಂದಾಪೂರ್, ಜಿಗಳಿಯ ಡಿ.ಹೆಚ್.ಮಂಜುನಾಥ್ ಸೇರಿದಂತೆ ಇನ್ನೂ ಅನೇಕರು ಶ್ರೀಗಳ ಭೇಟಿ ವೇಳೆ ಹಾಜರಿದ್ದರು.

ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು, ಕಣವಿ ಗ್ರಾಮ ಗಳಿಂದ ಆರಂಭಿಸಿದ ಕಾರ್ಯಕ್ರಮದಲ್ಲಿ ಭಕ್ತರು 76 ಕುರಿಗಳನ್ನು ನೀಡಿದರು.

error: Content is protected !!