ದೈವಜ್ಞ ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿ ಮಾತು: ಖಂಡನೆ

ದಾವಣಗೆರೆ, ಅ. 29- ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ಅವರು ದೈವಜ್ಞ ಬ್ರಾಹ್ಮಣ ಸಮಾಜದ ವಿರುದ್ಧ ದುರುದ್ಧೇಶವಾಗಿ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಕರ್ನಾಟಕ ಸ್ವರ್ಣಕಾರ ಸಂಘ ಖಂಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಡಿ.ರಾಯ್ಕರ್, ನಂಜುಂಡಿ ಅವರನ್ನು ಕೂಡಲೇ ಎಂಎಲ್‌ಸಿ ಸ್ಥಾನದಿಂದ ವಜಾ ಗೊಳಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ದೈವಜ್ಞರು ಮುದ್ದೆ ಕದಿಯುವವರು, ಅವರು ಕಾಳಿಕಾ ದೇವಿ ಆರಾಧನೆ ಮಾಡುವುದಿಲ್ಲ, ವಿಶ್ವಕರ್ಮ ನಿಗಮದಿಂದ ಕಿತ್ತೊಗೆಯಬೇಕು, ಗೋವಾದಿಂದ ಓಡಿ ಬಂದವರು, ಅವರಿಗೆ ನೀಡಿರುವ 2ಎ ಮೀಸಲಾತಿ ಮಾನ್ಯತೆ ಹಿಂಪಡೆಯಬೇಕು, ಅವರ ಕುಲ ಕಸುಬು  ಚಿನ್ನದ ಕೆಲಸವಲ್ಲ, ಭವಿಷ್ಯ ಹೇಳುವುದು ಎಂಬಿತ್ಯಾದಿ ಹೇಳಿಕೆ ನೀಡಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಹಯಗ್ರೀವ ದೈವಜ್ಞ ಯುವ ವೇದಿಕೆ ಕಾರ್ಯದರ್ಶಿ ಯೋಗರಾಜ್ ಆರ್.ಅಣ್ವೇಕರ್, ದೈವಜ್ಞ ಬ್ರಾಹ್ಮಣ ಸಮಾಜದ ನಿರ್ದೇಶಕ ಪ್ರಕಾಶ್ ಎಲ್.ದೈವಜ್ಞ, ಯೂತ್ಸ್ ಆಫ್ ದೈವಜ್ಞ ಅಧ್ಯಕ್ಷ ಸಚಿನ್ ವೆರ್ಣೇಕರ್, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಜಗನ್ನಾಥ ವೆರ್ಣೇಕರ್, ದೈವಜ್ಞ ವಿದ್ಯಾಸಂಸ್ಥೆ ಅಧ್ಯಕ್ಷ ಶಂಕರ್ ಎನ್.ವಿಠ್ಠಲಕರ್ ಉಪಸ್ಥಿತರಿದ್ದರು.

error: Content is protected !!