ದಾಖಲೆ ಕೊಟ್ಟರು ಖಾತೆ ಮಾಡಿಕೊಡದ ಪಾಲಿಕೆ : ರವೀಂದ್ರ ಕೆ. ಆರೋಪ

ದಾವಣಗೆರೆ, ಅ. 23- ಖಾತೆ ಮಾಡಿಸಿಕೊಳ್ಳಲು ಮಹಾನಗರ ಪಾಲಿಕೆಗೆ ಕೇಳಿದ ದಾಖಲೆಗಳನ್ನು ನೀಡಿದರೂ ನನ್ನ ಹೆಸರಿಗೆ ಖಾತೆ ಮಾಡಿಕೊಡದೆ ದಾಖಲೆಗಳನ್ನೇ ನೀಡಿರದ ಬೇರೊಬ್ಬರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಇಲ್ಲಿನ ವಿನೋಬನಗರದ ವಾಸಿ ರವೀಂದ್ರ ಕೆ. ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಂದೆ ಹೆಸರಿನ ಮನೆಯನ್ನು ಜಂಟಿ ಖಾತೆ ಮಾಡಿಸಲು ಪಾಲಿಕೆಗೆ ಅರ್ಜಿ ಸಲ್ಲಿಸಿದ್ದೆ. ಐದು ವರ್ಷಗಳಿಂದ ಅಲೆದಾಡಿ ಸುತ್ತಿರುವ ಅಧಿಕಾರಿಗಳು ಇದೀಗ ಬೇರೊಬ್ಬರಿಗೆ ಖಾತೆ ಮಾಡಿಕೊಟ್ಟಿದ್ದಾರೆ.  ಪಾಲಿಕೆ ಆಯುಕ್ತರಿಗೆ 4 ಅರ್ಜಿ ನೀಡಿ ದರೂ ಯಾವುದೇ ಸಮಸ್ಯೆ ಬಗೆಹರಿಸಿಲ್ಲ ಎಂದು ಹೇಳಿದರು.

ಪಾಲಿಕೆ ಈ ಕ್ರಮದ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ರಾಘವೇಂದ್ರ, ಮಹಾಂತೇಶ್ ಉಪಸ್ಥಿತರಿದ್ದರು.

error: Content is protected !!