ದಾವಣಗೆರೆ, ಅ.19- ಕರ್ನಾಟಕ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ದಾವಣಗೆರೆ ರೆಡ್ ಕ್ರಾಸ್ ಘಟಕ ಹಾಗೂ ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹಗಳ ಜೊತೆಗೂಡಿ ಸಂತ್ರಸ್ತರಿಗೆ ಆಹಾರ ಪದಾರ್ಥ, ಗೃಹಪಯೋಗಿ ವಸ್ತುಗಳು, ಹೊಸ ಬಟ್ಟೆ, ಹೊದಿಕೆಗಳನ್ನು ತಲುಪಿಸಲು ಮುಂದಾಗಿದೆ ಎಂದು ರೆಡ್ ಕ್ರಾಸ್ ಚೇರ್ಮನ್ ಡಾ. ಎ.ಎಂ. ಶಿವಕುಮಾರ್ ದಾನಿಗಳು ರೆಡ್ ಕ್ರಾಸ್ ನೊಂದಿಗೆ ಕೈ ಜೋಡಿಸಿ ಸಾಮಗ್ರಿಗಳನ್ನು ನಗರದ ರೆಡ್ ಕ್ರಾಸ್ ಕಚೇರಿಗೆ ತಂದು ಕೊಡಬಹುದು. ಸಮಯ : ಸೋಮವಾರ ದಿಂದ ಬುಧವಾರದವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ.
July 23, 2024