ದಾವಣಗೆರೆ ಷುಗರ್ಸ್‌ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ

ದಾವಣಗೆರೆ,ಅ.6- ತಾಲ್ಲೂಕಿನ ಕುಕ್ಕುವಾಡ ಗ್ರಾಮದಲ್ಲಿರುವ ದಾವಣಗೆರೆ ಷುಗರ್ ಕಂಪನಿಯಲ್ಲಿ 2020-21ನೇ ಸಾಲಿನ ಕಬ್ಬು ಅರೆಯುವ ಕಾರ್ಯವನ್ನು ಇಂದು ಆರಂಭಿಸಲಾಯಿತು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಅವರೊಂದಿಗೆ ನಿರ್ವಾಹಕ ನಿರ್ದೇಶಕ ಅಭಿಜಿತ್ ಜಿ. ಶಾಮನೂರು ಮತ್ತು ಶ್ರೀಮತಿ ಸ್ವಾತಿ ಅಭಿಜಿತ್ ಶಾಮನೂರು ದಂಪತಿ ಶ್ರೀ ಗಣಪತಿ – ಶ್ರೀ ಸರಸ್ವತಿ – ಶ್ರೀ ಲಕ್ಷ್ಮಿ ಪೂಜಾ ಸಮಾರಂಭವನ್ನು ನೆರವೇರಿಸುವುದರ ಮೂಲಕ ಕಬ್ಬು ಅರೆಯುವಿಕೆಗೆ ಚಾಲನೆ ನೀಡಿದರು. 

ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು, ಕಬ್ಬು ಬೆಳೆಗಾರರು, ರೈತ ಬಾಂಧವರು ಕಾರ್ಖಾನೆಯ ಆಡಳಿತಾಧಿಕಾರಿಗಳು, ನೌಕರರು, ಕಾರ್ಮಿಕ ವರ್ಗದವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!