ಜಿಲ್ಲೆಯ ಎಂಟು ಜನರಲ್ಲಿ ಕೊರೊನಾ ಸೋಂಕು

ಮೂವರು ಗುಣಮುಖ, 53 ಸಕ್ರಿಯ ಪ್ರಕರಣ

ದಾವಣಗೆರೆ, ಜು. 2 – ಜಿಲ್ಲೆಯಲ್ಲಿ ಗುರುವಾರ ಎಂಟು ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದೆ. ಇದೇ ದಿನದಂದು ಮೂವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಸಕ್ರಿಯ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಗುರುವಾರ ಖಚಿತಪಟ್ಟ ಪ್ರಕರಣಗಳ ಪೈಕಿ ಐದು ದಾವಣಗೆರೆ, ತಲಾ ಒಂದು ಚನ್ನಗಿರಿ, ಹೊನ್ನಾಳಿ ಹಾಗೂ ಹರಿಹರ ತಾಲ್ಲೂಕುಗಳಿಗೆ ಸೇರಿದವು.

ದಾವಣಗೆರೆಯ ದೇವರಾಜ ಸೊಸೈಟಿ ಬಳಿಯ 60 ಅಡಿ ರಸ್ತೆಯ ಪ್ರದೇಶದಲ್ಲಿ, ಎಂ.ಸಿ.ಸಿ. ಎ ಬ್ಲಾಕ್‌, ಚೌಕಿ ಪೇಟೆಯ ವಿಠಲ ಮಂದಿರ ಬಳಿ, ಪಿ.ಬಿ. ರಸ್ತೆಯ ರಿಲೈಯನ್ಸ್ ಮಾರ್ಕೆಟ್ ಬಳಿ ಹಾಗೂ ಬೇತೂರು ರಸ್ತೆಗಳಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದಿವೆ.

ಚನ್ನಗಿರಿಯ ರಾಜಗೊಂಡನಹಳ್ಳಿ, ಹೊನ್ನಾಳಿಯ ಕ್ಯಾಸಿನಕೆರೆ ಹಾಗೂ ಹರಿಹರದ ಭಾರತ್ ಕಾಂಪೌಂಡ್ ಪ್ರದೇಶಗಳಲ್ಲಿನ ತಲಾ ಒಬ್ಬರಲ್ಲಿ ಸೋಂಕಿರುವುದು ಕಂಡು ಬಂದಿದೆ. ಇದೇ ದಿನದಂದು ಹರಿಹರದ ಅಗಸರ ಬೀದಿಯ ಒಬ್ಬರು ಹಾಗೂ ದಾವಣಗೆರೆಯ ಕೆ.ಟಿ.ಜೆ. ನಗರ ಹಾಗೂ ಜ್ಯುಬಿಲಿಬಾವಿ ರಸ್ತೆಯ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

error: Content is protected !!