ವಿಶ್ವ ಸೈಕಲ್ ದಿನ, ವಿಶ್ವ ಪರಿಸರ ದಿನ ರೋಟರಿ ಕ್ಲಬ್ ನಿಂದ ಸೈಕಲ್ ಜಾಥಾ

ದಾವಣಗೆರೆ, ಜೂ.23- ವಿಶ್ವ ಸೈಕಲ್ ದಿನ ಮತ್ತು ವಿಶ್ವ ಪರಿಸರ ದಿನದ ಅಂಗವಾಗಿ ನಗರದ ರೋಟರಿ ಸಂಸ್ಥೆ ಮತ್ತು ಬೈಸಿಕಲ್ ಕ್ಲಬ್ ವತಿಯಿಂದ ಸೈಕಲ್ ಜಾಥಾ ನಡೆಸಲಾಯಿತು.

ರೋಟರಿ ಸಂಸ್ಥೆಯಿಂದ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಮಾರ್ಗವಾಗಿ ಶ್ರೀ ಅಕ್ಕಮಹಾದೇವಿ ರಸ್ತೆಯಿಂದ  ರಿಲಾಯನ್ಸ್‌ ಮಾರ್ಕೆಟ್‌ಗೆ ಬಂದು ನಿಧಾನಗತಿ ಸ್ಪರ್ಧೆ ಏರ್ಪಡಿಸಲಾಯಿತು.

ರಸ್ತೆ ಉದ್ದಕ್ಕೂ ಸೈಕಲ್ ಉಪಯೋಗಿಸಿ ಪರಿಸರ ಉಳಿಸಿ, ಸೈಕಲ್ ಬಳಿಸಿ  ಇಂಧನ ಉಳಿಸಿ ಘೋಷಣೆ  ಹಾಕಲಾಯಿತು. ನಿಧಾನಗತಿ ಬೈಸಿಕಲ್ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಜ್ಞಾನೇಶ್ವರ್ ಜವಳಿ ಮತ್ತು ಮನೋಜ್ ವಿಜೇತರಾದರು. ವಿಜೇತರಿಗೆ ಬಹುಮಾನವನ್ನು ರೋಟರಿ ಸಂಸ್ಥೆ   ಅಧ್ಯಕ್ಷ ವಿಕಾಸ ಸಂಘವಿ, ದಾವಣಗೆರೆ ಬೈಸಿಕಲ್ ಕ್ಲಬ್ ಅಧ್ಯಕ್ಷ ರಾಜೇಂದ್ರ ಪ್ರಸಾದ್, ರಿಲಾಯನ್ಸ್ ಮಾರ್ಕೆಟ್ ಮ್ಯಾನೇಜರ್ ರಂಗನಾಥ ಅವರು ವಿತರಿಸಿದರು.

ರೋಟರಿಯನ್‌ ಜಗನ್ನಾಥ, ಡಾ. ಪಾಟೀಲ, ಡಾ. ರಾಘವೇಂದ್ರ, ರಮೇಶ್ ಜೈನ್‌, ಡಾ. ಸುರೇಶ್, ಎ.ಕೆ. ವಿನಯ, ಮಹೇಶ್, ಜಯಂತಿಲಾಲ್ ಜೈನ್‌, ಗಣರಾಜ್, ವೀರೇಶ್, ಗಿರೀಶ್, ಕಂ ವೀರೇಶ, ಅಮರ್, ರವಿಶಂಕರ್, ರುಷಲ, ಸಂಘವಿ, ಪವನ, ನಿರಂಜನ, ಜಯಕುಮಾರ್, ದೀಕ್ಷಿತಾ ಜೈನ್, ಅಶಿಕ್ ಜೈನ್, ಪಂಕಜ್ ಜೈನ್ ಮತ್ತಿತರರು  ಕಾರ್ಯಕ್ರಮದಲ್ಲಿ ಸಹಭಾಗಿಯಾಗಿದ್ದರು.

error: Content is protected !!