‘ಶೆಲ್’ ಕಂಪನಿಯ ಬೇತೂರು ಇಂಧನ ಕೇಂದ್ರ ಉದ್ಘಾಟನೆ

ದಾವಣಗೆರೆ,ಜೂ.19- ಅಂತರ ರಾಷ್ಟ್ರೀಯ ಹೆಸರಾಂತ `ಶೆಲ್’ ಇಂಧನ ಸಂಸ್ಥೆಯ ಮಾರಾಟ ಮಳಿಗೆ ‘ಬೇತೂರು ಇಂಧನ ಕೇಂದ್ರ’ ವು ನಗರದ ಪಿ.ಬಿ. ರಸ್ತೆಯಲ್ಲಿ ನಿನ್ನೆ ಕಾರ್ಯಾರಂಭವಾಯಿತು. 

ಹೆಬ್ಬಾಳು ಗ್ರಾಮದ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಗಣ್ಯರ, ಹಿತೈಷಿ ಗಳ, ಆತ್ಮೀಯರ, ಗ್ರಾಹಕರ ಮತ್ತು ಬಂಧುಗಳ ಚಪ್ಪಾಳೆಗಳ ಮಧ್ಯೆ ಟೇಪು ಕತ್ತರಿಸುವುದರ ಮೂಲಕ ನೂತನ `ಬೇತೂರು ಇಂಧನ ಕೇಂದ್ರ’ ವನ್ನು ಸರಳ ಪೂಜೆಯೊಂದಿಗೆ ಉದ್ಘಾಟಿಸಿದರು.

ಹರಿಹರ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮುರುಗೇಶಪ್ಪ, ಡಾ. ಮರಳೀಹಳ್ಳಿ, ಬೇತೂರು ಮುರುಗೇಶ್, ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಜಯ ರುದ್ರಪ್ಪ, ನಿವೃತ್ತ ಅಭಿಯಂತರ ಚಂದ್ರಶೇಖರಪ್ಪ, ಟಿ.ಎಸ್. ಸಿದ್ದಲಿಂಗೇಶ್, ಉದ್ಯಮಿ ಬಕ್ಕೇಶ್, ಶೆಲ್ ಕಂಪನಿಯ ಅಧಿಕಾರಿಗಳು ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನೂತನ ಇಂಧನ ಸಂಸ್ಥೆಗೆ ಶುಭ ಹಾರೈಸಿದರು.

 ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳನ್ನು `ಬೇತೂರು ಇಂಧನ ಕೇಂದ್ರ’ದ ಪಾಲುದಾರರಾದ ಬೇತೂರು ಸೋಮಶೇಖರ್ ಮತ್ತು ಬೇತೂರು ಚಂದ್ರಶೇಖರ್ ಅವರುಗಳು ಸ್ವಾಗತಿಸಿ, ಬೀಳ್ಕೊಟ್ಟರು.

error: Content is protected !!