ಮಾಯಕೊಂಡದಲ್ಲಿ ಶಾಂತಿ ಹೋಮ

ದಾವಣಗೆರೆ, ಜೂ.15- ಮಾಯಕೊಂಡ ದಲ್ಲಿ ಪುರ ಅಭಿವೃದ್ಧಿ ಕ್ರಿಯಾಶೀಲ ವೇದಿಕೆ ವತಿಯಿಂದ ಕೊರೊನಾ ನಿರ್ಮೂಲನೆಗಾಗಿ ಶ್ರೀ ಕಾಶಿ ವಿಶ್ವನಾಥ ಈಶ್ವರಸ್ವಾಮಿ ದೇವಸ್ಥಾನದಲ್ಲಿ ಶಾಂತಿ ಹೋಮ ನಡೆಯಿತು.

ಕೊರೊನಾ  ಗ್ರಾಮಕ್ಕೆ ಬರದಂತೆ ತಡೆಯಲು ಮತ್ತು ಪುಟ್ಟ ಕಂದಮ್ಮಗಳನ್ನು ಕೊರೊನಾದಿಂದ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಳಿತನ್ನು ಬಯಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಶಾಂತಿ ಹೋಮದ ಮೂಲಕ ಪುಣ್ಯ ಸಂಪಾದನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎಂ.ಎಸ್.ಕೆ ಶಾಸ್ತ್ರಿ ವೇದ ಘೋಷ ಪಠಿಸಿದರು. ಹೆಚ್‌.ಎಸ್‌. ವೆಂಕಟೇಶ್‌, ನೀರಗಂಟಿ ಶ್ರೀನಿವಾಸ್‌, ಬಿ.ಟಿ. ಹನುಮಂತಪ್ಪ, ಗುಮಾನಿ ರಾಮಚಂದ್ರಪ್ಪ, ಮಮತಮ್ಮ, ನಾಗರಾ ಜಚಾರ್‌, ಗಂಟಪ್ಪಳ ನಿಜಗುಣಪ್ಪ, ಗೌರಮ್ಮ, ಪಕ್ಕೀರಪ್ಪ ನಾಯಕ, ವೀಣಾ ಬಸವರಾಜಪ್ಪ, ಗೀತಮ್ಮ, ವಾಗೀಶ್, ಹೊಳೆಯಪ್ಪಳ ಮಲ್ಲಪ್ಪ, ತಿಮ್ಮಕ್ಕ, ಮೈಲಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!