ಡೆಂಗ್ಯೂ, ಚಿಕುನ್ ಗುನ್ಯ ಮುಂಜಾಗ್ರತಾ ಕ್ರಮಕ್ಕೆ ಡಿಹೆಚ್ಒ ಸಲಹೆ

ದಾವಣಗೆರೆ, ಮೇ 29- ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು ಈಡೀಸ್ ಸೊಳ್ಳೆಗಳಿಂದ ಡೆಂಗ್ಯೂ ಮತ್ತು ಚಿಕುನ್‌ಗುನ್ಯ ರೋಗದ ಪ್ರಕರಣಗಳು ಹೆಚ್ಚಾಗುವ ಸಂಭವವಿದ್ದು, ಸಾರ್ವಜನಿಕರು  ಮುಂಜಾ ಗ್ರತಾ ಕ್ರಮಗಳನ್ನು ಅನುಸರಿಸಿ ರೋಗಕ್ಕೆ ತುತ್ತಾಗುವು ದನ್ನು ತಪ್ಪಿಸಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.

ನಗರದ ಜಿಲ್ಲಾ ಸರ್ವೇಕ್ಷಣಾ ಘಟಕ ವತಿಯಿಂದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ  ಇಂದು ಆಯೋಜಿಸ ಲಾಗಿದ್ದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ವಿಬಿಡಿಸಿ ಅಧಿಕಾರಿ ಡಾ. ನಟರಾಜ ಮಾತ ನಾಡಿ, ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಈಡೀಸ್ ಸೊಳ್ಳೆ ಮರಿ ಅಭಿವೃದ್ಧಿ ತಾಣಗಳ ಸಮೀಕ್ಷೆ ನಡೆಸಿ, ಲಾರ್ವಾ ಕಂಡು ಬಂದರೆ ಆರೋಗ್ಯ ಶಿಕ್ಷಣದ ಮೂಲಕ ನಿರ್ಮೂಲನೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಅವರು ಮನೆಗಳಿಗೆ ಬಂದಾಗ ಸಹಕಾರ ನೀಡಿ ಮನೆಗಳಲ್ಲಿ ಲಾರ್ವಾ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಡೆಂಗ್ಯೂ ರೋಗವಾಹಕ ಈಡೀಸ್ ಸೊಳ್ಳೆಯು ಮನೆಯ ಪರಿಸರದಲ್ಲಿಯೇ ಉತ್ಪತ್ತಿಯಾಗುವುದರಿಂದ ಡೆಂಗ್ಯೂ ರೋಗದ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಭಾಗಿತ್ವ  ಅವಶ್ಯವಿದ್ದು, ಡೆಂಗ್ಯೂ ಜ್ವರವನ್ನು   ಹತೋಟಿಯಲ್ಲಿಡಲು ಸಾಧ್ಯ ಎಂದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ. ಕೆ.ಹೆಚ್. ಗಂಗಾಧರ ಕೀಟಶಾಸ್ತ್ರಜ್ಞ ಸತೀಶ ಮಾಳಗಿ, ಆರೋಗ್ಯ ಮೇಲ್ವಿಚಾರಕ ವಿಜಯಕುಮಾರ ಘಟ್ಟಿ, ಆರೋಗ್ಯ ನಿರೀಕ್ಷಕ ಆಂಜನೇಯ, ರಾಜಪ್ಪ, ಕೊಟ್ರೇಶ್, ರಾಘವೇಂದ್ರ, ನವೀನ್‌ಕುಮಾರ್, ಪ್ರಹ್ಲಾದ್  ಮತ್ತಿತರರು ಉಪಸ್ಥಿತರಿದ್ದರು.

error: Content is protected !!