ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಖರೀದಿ ಆದೇಶಕ್ಕೆ ಎಸ್‌ಎಆರ್‌ ಸ್ವಾಗತ

ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಖರೀದಿ ಆದೇಶಕ್ಕೆ ಎಸ್‌ಎಆರ್‌ ಸ್ವಾಗತ - Janathavaniದಾವಣಗೆರೆ, ಮೇ 16-  ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಮತ್ತು ಬಿಳಿಜೋಳ, ಆಹಾರ ಧಾನ್ಯಗಳನ್ನು ಮೇ 31ರವರೆಗೆ ಖರೀದಿಸಲು ಸರ್ಕಾರದ ಆದೇಶ ವಾಗಿರುವುದನ್ನು ಸ್ವಾಗತಿಸುವುದಾಗಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದ್ದಾರೆ.

ರೈತರುಗಳು ಖರೀದಿ ಕೇಂದ್ರಗಳಲ್ಲಿ ತುರ್ತಾಗಿ ತಮ್ಮ ಹೆಸರುಗಳನ್ನು  ನೋಂದಾಯಿಸುವ ಮೂಲಕ ಖರೀದಿ ಕೇಂದ್ರಗಳಲ್ಲಿ ತಮ್ಮ ಬೆಳೆಗಳನ್ನು ಮಾರಾಟ ಮಾಡಿ ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.

error: Content is protected !!