ಜಗಳೂರು : ಶ್ಯಾನುಭೋಗ ಕೆ. ವೆಂಕಟರಾವ್ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಬ್ಯಾಗ್‌ ವಿತರಣೆ

ಜಗಳೂರು, ನ.18- ತಾಲ್ಲೂಕಿನ ಗುತ್ತಿದುರ್ಗ ಗ್ರಾಮದ ಶ್ಯಾನುಭೋಗ್‌ ಕೆ. ವೆಂಕಟರಾವ್‌ ಸೇವಾ ಟ್ರಸ್ಟ್‌ ಪ್ರತಿಷ್ಠಾನದ ವತಿಯಿಂದ ತಾಲ್ಲೂಕಿನ ಹೊಸೂರು (ಚಿಕ್ಕರಕೆರೆ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್‌ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

 ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೇದಾರ್ ಹಾಗೂ ಪ್ರತಿಷ್ಠಾನದ ಕಾರ್ಯದರ್ಶಿ ಜಿ.ಕೆ. ನಾಗರಾಜ್ ರಾವ್, ಅಧ್ಯಕ್ಷ ಜಿ.ವಿ. ಕೃಷ್ಣಮೂರ್ತಿ ರಾವ್ ಮತ್ತು ಸದಸ್ಯರಾದ ಜಿ.ಕೆ. ಸ್ವರೂಪ್ ವಿತರಿಸಿದರು.

ಶಾಲೆಯ ಬುದ್ಧಿಮಾಂದ್ಯ ವಿದ್ಯಾರ್ಥಿನಿ ಕೆ. ಸ್ಪಂದನಾಗೆ ದಿ. ರತ್ನಮ್ಮ ವೆಂಕಟರಾವ್ ಹೆಸರಿನಲ್ಲಿ ಧನ ಸಹಾಯ ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಅರುಣ್ ಕುಮಾರ್, ಸ್ವಾಮಿ, ಮಂಜುನಾಥ್, ಎಂ.ಬಿ. ಚನ್ನಬಸಪ್ಪ ಉಪಸ್ಥಿತರಿದ್ದರು.

ಶಾಲಿನಿ ಮತ್ತು ಪಿ. ಮೇಘ ಪ್ರಾರ್ಥಿಸಿದರು. ಎಂ. ತಿಮ್ಮೇಶ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎಂ. ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಶಿಕ್ಷಕ ಎಂ. ತಿಮ್ಮೇಶ್ ವಂದಿಸಿದರು.

error: Content is protected !!