ಕಸಾಪ ಜಾತಿ ಆಧಾರಿತವಾಗಬಾರದು

ಹರಪನಹಳ್ಳಿಯಲ್ಲಿ ಬಳ್ಳಾರಿ ಜಿಲ್ಲೆಯ ಕಸಾಪ  ಅಭ್ಯರ್ಥಿ ಕೆ. ಜಗದೀಶ್ ಬಳ್ಳಾರಿ

ಹರಪನಹಳ್ಳಿ, ನ.18- ಕನ್ನಡ ಸಾಹಿತ್ಯ ಪರಿಷತ್ ಜಾತಿ ಆಧಾರಿತ ವಾಗಬಾರದು ಎಂದು  ಬಳ್ಳಾರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ  ಕೆ. ಜಗದೀಶ್ ಬಳ್ಳಾರಿ ಹೇಳಿದರು.

ಪಟ್ಟಣದ ನಂದಿಬೇವೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಲಕ್ಷ್ಮೀ ಚಂದ್ರಶೇಖರ್‌ ಅವರ ನಿವಾಸ ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸರ್ಕಾರಿ ಉದ್ಯೋಗದಲ್ಲಿರುವವರು ಸಾಹಿತ್ಯ ಪರಿಷತ್‍ನಲ್ಲಿ ಸೇವೆ ಮಾಡುವುದು ವಿರಳ. ನಾನು ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿ ಸದಾ ಕನ್ನಡ ಸೇವೆಗೆ ಸಿದ್ದನಿದ್ದೇನೆ. ರಂಗಭೂಮಿಯಲ್ಲಿ ಕಳೆದ 43 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇದುವರೆಗೆ 785 ನಾಟಕಗಳನ್ನು ಪ್ರದರ್ಶನ ಮಾಡಿದ ಅನುಭವವಿದೆ ಎಂದರು.

ನಗರದ ಹಂಪಿ ಉತ್ಸವವನ್ನು ಪ್ರತಿವರ್ಷ ನಡೆಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ. ಬಳ್ಳಾರಿ ಮತ್ತು ವಿಜಯ ನಗರ ಜಿಲ್ಲೆಯಲ್ಲಿ ಲಕ್ಷ ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಅಭಿಯಾನ, ಕ್ರಿಯಾಶೀಲ ಗ್ರಾಮಗಳಲ್ಲಿ ಬಯಲು ರಂಗಮಂದಿರ ನಿರ್ಮಾಣ ಸೇರಿದಂತೆ, ತಾವು ಅಧ್ಯಕ್ಷರಾದ ನಂತರ ಮಾಡಬೇಕೆಂದಿರುವ ಕೆಲಸಗಳ ಮಾಹಿತಿ ನೀಡಿದರು. 

ಈ ವೇಳೆ  ಗೋವರ್ಧನ ರೆಡ್ಡಿ, ಕಣಿವಿಹಳ್ಳಿ ಚಂದ್ರಶೇಖರ್‌, ವಿ.ಬಿ. ಮಲ್ಲಪ್ಪ ಇನ್ನಿತರರಿದ್ದರು.

error: Content is protected !!