ಹರಪನಹಳ್ಳಿ : ಸಸಿಗಳ ನೆಡುವ ಕಾರ್ಯಕ್ರಮ

ಹರಪನಹಳ್ಳಿ, ಆ.17- ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ್ಯ ಕ್ರೀಡಾಂಗಣದ ಆವರಣದಲ್ಲಿ ಅರಣ್ಯ ಇಲಾಖೆ ಯಿಂದ 75 ಗಿಡಗಳನ್ನು ನೆಡುವುದಕ್ಕೆ ಉಪವಿಭಾಗಾ ಧಿಕಾರಿ ಚಂದ್ರಶೇಖರಯ್ಯ ಹೆಚ್.ಜಿ.  ಚಾಲನೆ ನೀಡಿದರು.

ಈ ವೇಳೆ ಡಿವೈಎಸ್ಪಿ  ವಿ.ಎಸ್. ಹಾಲುಮೂರ್ತಿ ರಾವ್, ವಲಯ ಅರಣ್ಯಾಧಿಕಾರಿ ಭರತ್ ಡಿ. ತಳವಾರ್, ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್,  ಉಪಾಧ್ಯಕ್ಷರಾದ ನಿಟ್ಟೂರು ಭೀಮವ್ವ,  ತಹಶೀಲ್ದಾರ್  ನಂದೀಶ್ ಎಲ್.ಎಂ, ಕಾರ್ಯ ನಿರ್ವಾಹಣಾಧಿಕಾರಿ ಕೆ.ಆರ್. ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಯರಗುಡಿ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ ವೀರಭದ್ರಯ್ಯ,  ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಗೊಂದಿ,  ನೌಕರರ ಸಂಘದ ಅಧ್ಯಕ್ಷ ಕೆ.ಸಿದ್ದಲಿಂಗನಗೌಡ, ಸಮಾಜ ಕಲ್ಯಾಣ ಅಧಿಕಾರಿ ಆನಂದ ಯು. ಡೊಳ್ಳಿನ, ಪುರಸಭೆ ಸದಸ್ಯ ರಾದ ಜಾಕೀರ್ ಹುಸೇನ್, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ್, ಸಿಪಿಐ ನಾಗರಾಜ್ ಕಮ್ಮಾರ, ಪಿಎಸ್‍ಐ ಸಿ. ಪ್ರಕಾಶ್, ತಾಲ್ಲೂಕು ಆರೋಗ್ಯಾಧಿಕಾರಿ ದೇವರಾಜ್, ಮೀನುಗಾರಿಕೆ ಇಲಾಖೆಯ ಮಂಜುಳಾ  ಆರ್.ಐ. ಎಸ್ ಅರವಿಂದ್ ಸೇರಿದಂತೆ ಇತರರಿದ್ದರು. 

error: Content is protected !!