ರಿಯಾಯ್ತಿ ಪಡೆದು ಕಂತಿನ ಹಣ ಪಾವತಿಸಲು ಸೂಚನೆ

ದಾವಣಗೆರೆ, ಮಾ.26- ಕೃಷಿ ಉದ್ದೇಶಗಳಿಗೆ ಸಾಲ ಪಡೆದು ಇದೇ ತಿಂಗಳ ಅಂತ್ಯಕ್ಕೆ ಮಾರ್ಚ್ 31 ತಗಾದೆ ಕಂತು ಬಂದಿರುವ ರೈತರು, ವಾಯ್ದೆ ಶೇ.3 ಬಡ್ಡಿ ದರದಲ್ಲಿ ಕಂತಿನ ಹಣ ಪಾವತಿಸಿದಲ್ಲಿ ಸರ್ಕಾರದ ಬಡ್ಡಿ ರಿಯಾಯ್ತಿ ದೊರೆಯಲಿದೆ. 

ತಪ್ಪಿದಲ್ಲಿ ಪೂರ್ತಿ ಬಡ್ಡಿಯೊಂದಿಗೆ ಇತರೇ ವೆಚ್ಚಗಳೊಂದಿಗೆ ಪಾವತಿಸಬೇಕಾಗುತ್ತದೆ. ಕಾರಣ ಸರ್ಕಾರದ ರಿಯಾಯ್ತಿ ಪಡೆದು ತಕ್ಷಣ ಕಂತಿನ ಹಣ ಪಾವತಿಸಲು ಸೂಚಿಸಿದೆ. 

ಕೃಷಿ ಉದ್ದೇಶದಲ್ಲಿ ಸಾಲ ಪಡೆದು ಸುಸ್ತಿದಾರರಾಗಿರುವ ಸಾಲಗಾರರು ಈ ಹಿಂದೆ ಸರ್ಕಾರ ಬಡ್ಡಿ ಮನ್ನಾ ಯೋಜನೆ ನೀಡಿದಾಗ್ಯೂ ಪಡೆದ ಸಾಲವನ್ನು ಪಾವತಿಸದೆ, ನಿರ್ಲಕ್ಷ್ಯ ವಹಿಸಿದ ಸಾಲಗಾರರು ಮಾ.31 ರೊಳಗೆ ಪೂರ್ತಿ ಸುಸ್ತಿ ಹಾಗೂ ಕಂತಿನ ಹಣ ಪಾವತಿಸಲು ಕೋರಿದೆ.

ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಜರುಗಿಸಿ ವಸೂಲಿ ಮಾಡಲಾಗುವುದು. ರೈತರು ತಕ್ಷಣ ಸುಸ್ತಿ ಮೊತ್ತ ಪಾವತಿಸಿ, ಶೇ.3 ಬಡ್ಡಿ ದರದಲ್ಲಿ ಹೊಸ ಸಾಲ ಪಡೆದುಕೊಳ್ಳುವಂತೆ ತಾಲ್ಲೂಕಿನ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕೆ.ಬಿ. ಸಿದ್ದೇಶ್ ಹಾಗೂ ವ್ಯವಸ್ಥಾಪಕ ಟಿ.ಎನ್. ಭೂಷಣ್ ತಿಳಿಸಿದ್ದಾರೆ.

error: Content is protected !!