ಆರೋಗ್ಯ ಸಿಬ್ಬಂದಿಗಳಿಗೆ ಬೆದರಿಕೆ

ಹರಪನಹಳ್ಳಿ, ಮಾ.26- ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರನ್ನು ಗುರುತಿಸಿ, ಕ್ವಾರಂಟೈನ್ ಮಾಡಲು ಮುಂದಾದ  ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ದೌರ್ಜನ್ಯ ಮಾಡುವುದಾಗಿ ಎಚ್ಚರಿಕೆ ನೀಡುತ್ತಿರುವ ಘಟನೆಗಳು ಜರುಗುತ್ತಿದ್ದು, ಆರೋಗ್ಯ ಸಿಬ್ಬಂದಿ ಅರಿವು ಮೂಡಿಸಲು ಹರಸಾಹಸ ಪಡುತ್ತಿದ್ದಾರೆ. 

ಕೊರೊನಾ ಅಲೆ ನಿಧಾನ ಗತಿಯಲ್ಲಿ ಕಾಲಿ ಡುತ್ತಿದ್ದು, ಸಾರ್ವಜನಿಕರಿಗೆ ಅರಿವು ಮೂಡಿ ಸಲು ಮುಂದಾದ ಆರೋಗ್ಯ ಸಿಬ್ಬಂದಿಗಳಿಗೆ ನಿಂದಿಸುತ್ತಿರುವ ಘಟನೆಗಳು ಜರುಗುತ್ತಿವೆ. ಇದನ್ನರಿತ ತಾಲ್ಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಸಾರ್ವಜನಿಕರಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸ ಲಾಗುತ್ತಿದ್ದು, ಸೋಂಕಿತರು ಆರೋಗ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಶಾಂತಿಯಿಂದ ನಡೆದು ಕೊಂಡು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ತಾಲ್ಲೂಕಿನಲ್ಲಿ ಎರ ಡಂಕಿಯಲ್ಲಿ ಕೊರೊನಾ ಸೋಂಕಿತರು ದಾಖ ಲಾಗಿದ್ದಾರೆ. ಮುತ್ತಿಗೆ, ಉದಗಟ್ಟಿ, ಮತ್ತಿಹಳ್ಳಿ ಹಾಗೂ ಪಟ್ಟಣದಲ್ಲಿ ನಾಲ್ವರು ಸೋಂಕಿತರನ್ನು ಗುರುತಿಸಲಾಗಿದೆ ಎಂದರು.

error: Content is protected !!