ನಗರಕ್ಕೆ 10-12 ದಿನಗಳಿಗೊಮ್ಮೆ ನೀರು ಸರಬರಾಜು : ಸರಿಪಡಿಸಲು ಒತ್ತಾಯ

ನಗರಕ್ಕೆ 10-12 ದಿನಗಳಿಗೊಮ್ಮೆ ನೀರು ಸರಬರಾಜು : ಸರಿಪಡಿಸಲು ಒತ್ತಾಯ - Janathavaniದಾವಣಗೆರೆ, ಮಾ.24 – ನಗರದಲ್ಲಿ ನೀರಿನ ಹಾಹಾಕಾರ ಪ್ರಾರಂಭವಾಗಿದ್ದು, ದಾವಣಗೆರೆ ನಗರದ ಬಹುತೇಕ ಎಲ್ಲಾ ಭಾಗಗಳಲ್ಲೂ 10-12 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಬಂದಿದೆ.

ಆದರೂ ಮೇಯರ್ ಅವರು ಇಂದು ಪತ್ರಿಕೆಗಳಲ್ಲಿ ನೀಡಿರುವ ಹೇಳಿಕೆ ಬೇಸರ ತರಿಸುವಂತಿದ್ದು. ಯಾವ ಭಾಗದಲ್ಲಿ 5-6 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.

 ಮೇಯರ್ ಅವರು ವಾಸ್ತವಾಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೇ ಹೊರತು, ಯಾವುದೋ ಅಧಿಕಾರಿಗಳು ಹೇಳಿದ ರೀತಿಯಲ್ಲಿ ಹೇಳಿಕೆ ನೀಡಬಾರದೆಂದು ಸಲಹೆ ನೀಡಿದ್ದಾರೆ.

ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಹೆಚ್ಚು ಎಂಬುದನ್ನು ಮನಗಂಡು ಮೇಯರ್ ಅವರು ಕನಿಷ್ಠ 3-4 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

error: Content is protected !!