ದಾವಣಗೆರೆ, ಮಾ.22 – ನಗರದ ಮಿಲ್ಲತ್ ಪ್ರೌಢಶಾಲೆ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣಾ ಶಿಬಿರ ನಡೆಯಿತು. ದಾವಣಗೆರೆ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೊಟ್ರೇಶ್, ಶಿಕ್ಷಣ ಸಂಯೋಜಕ ಹೆಚ್.ವಿ. ಶ್ರೀನಿವಾಸ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಗಾಯತ್ರಿ, ಬಿ.ಆರ್.ಸಿ. ಸುರೇಂದ್ರ ನಾಯ್ಕ, ಶಾಲೆ ಮುಖ್ಯೋಪಾಧ್ಯಾಯ ಜಾಕೀರ್ ಹುಸೇನ್ ಪಾಲ್ಗೊಂಡಿದ್ದರು.
July 24, 2024