ಶಿಕ್ಷಕರ ಬಡ್ತಿಗೆ ಜೇಷ್ಠತಾ ಪಟ್ಟಿ ಪ್ರಕಟ : ಆಕ್ಷೇಪಣೆ ಆಹ್ವಾನ

ದಾವಣಗೆರೆ, ಮಾ. 21 – ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಹಾಗೂ ಬಡ್ತಿ ಮುಖ್ಯ ಶಿಕ್ಷಕರಿಂದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ 2021 ರ ಜ.31 ರಲ್ಲಿದ್ದಂತೆ ಮಾಹಿತಿ ಸರಿಪಡಿಸಲಾಗಿದ್ದು, ಡಿಡಿಪಿಐ ಅವರ ಸೂಚನೆ ಯಂತೆ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ನಾಳೆ ದಿನಾಂಕ 22 ಕೊನೆಯ ದಿನವಾಗಿದೆ.  

ಜೇಷ್ಠತಾ ಪಟ್ಟಿಯನ್ನು ಕಛೇರಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದ್ದು ಸಂಬಂಧಿಸಿದ/ಬಾಧಿತ ಶಿಕ್ಷಕರು ಜೇಷ್ಠತಾ ಪಟ್ಟಿ ಪರಿಶೀಲಿಸಿಕೊಂಡು, ಮಾಹಿತಿ ತಪ್ಪಾಗಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಕಛೇರಿಗೆ ಆಕ್ಷೇಪಣೆ ಸಲ್ಲಿಸಬಹುದು. ಅಲ್ಲದೆ ಯಾವುದೇ ಶಿಕ್ಷಕರ ಹೆಸರು ಪಟ್ಟಿಯಲ್ಲಿ ಬಿಟ್ಟುಹೋಗಿದ್ದಲ್ಲಿ ಅಂತಹ ಹೆಸರುಗಳನ್ನು ಸೇರ್ಪಡೆ ಮಾಡಲು ಸಂಬಂಧಿಸಿದವರು ಲಿಖಿತ ಮನವಿಯನ್ನು ಮಾ.22 ರ ಒಳಗೆ ದಾವಣಗೆರೆ ಬಿಇಒ ಉತ್ತರ ವಲಯ ಈ ಕಚೇರಿಗೆ ಸಲ್ಲಿಸಲು ಈ ಹಿಂದೆ  ತಿಳಿಸಲಾಗಿತ್ತು.  ಆದರೆ ಇದುವರೆಗೂ ಯಾವುದೇ ಸಂಬಂಧಿಸಿದ/ಬಾಧಿತ ಶಿಕ್ಷಕರು ಕಛೇರಿಗೆ ಆಕ್ಷೇಪಣೆ ಸಲ್ಲಿಸಿರುವುದಿಲ್ಲ. ಸಂಬಂಧಿಸಿದವರು ತಮ್ಮ ಆಕ್ಷೇಪಣೆಗಳನ್ನು ನಾಳೆ ದಿನಾಂಕ 22 ರ ಒಳಗಾಗಿ ಸಲ್ಲಿಸಬಹುದು ಎಂದು ದಾವಣಗೆರೆ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!