ರವಿಕುಮಾರ್‌ಗೆ ಸಚಿವ ಸ್ಥಾನ ನೀಡಲು ಜಿಲ್ಲಾ ಗಂಗಾಮತಸ್ಥರ ಸಂಘದ ಆಗ್ರಹ

ದಾವಣಗೆರೆ, ಜು.31- ನೂತನ ರಾಜ್ಯ ಸರ್ಕಾರದಲ್ಲಿ ಗಂಗಾಮತ (ಬೆಸ್ತರ) ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲಾ ಗಂಗಾಮತಸ್ಥರ ಸಂಘ ಒತ್ತಾಯಿಸಿದೆ. 

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಬಿ.ಕೆ. ಮಂಜುನಾಥ್ ಮಾಗಾನಹಳ್ಳಿ ಅವರು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಗಂಗಾಮತ ಸಮಾಜದ ಮುಖಂಡರೂ, ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿದರು.

ಮೂಲತಃ ಜಗಳೂರು ತಾಲ್ಲೂಕಿನ ಉಚ್ಚಂಗಿಪುರದವರಾದ ರವಿಕುಮಾರ್ ಅವರಿಗೆ ಪ್ರಥಮ ಆದ್ಯತೆಯನ್ನಾಗಿ, ನಂತರ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ ಅವರಿಗಾದರೂ ಸಚಿವ ಸ್ಥಾನ
ನೀಡಬೇಕು. ಜೊತೆಗೆ ಸೋದರ ಸಮಾಜವಾದ ಯಾದವ
ಸಮಾಜದ ಶಾಸಕಿ ಪೂರ್ಣಿಮಾ ಅವರಿಗೂ ಸಚಿವ ಸ್ಥಾನ ನೀಡಲು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಉಮೇಶ್, ಮುಖಂಡರಾದ ಕೆ. ಶಿವಮೂರ್ತಿ, ಎಸ್. ಚಂದ್ರಪ್ಪ, ಅಶೋಕ್ ಕೋಲ್ಕುಂಟೆ, ಮಹಾಂತೇಶ್ ಮತ್ತಿತರರು ಇದ್ದರು.

error: Content is protected !!