ಅದ್ಧೂರಿ ಹುಟ್ಟುಹಬ್ಬದ ಬದಲಾಗಿ ಪೌರ ಕಾರ್ಮಿಕರಿಗೆ ಹಬೆ ಯಂತ್ರಗಳ ವಿತರಣೆ

ನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ವಿಶಿಷ್ಟ ಆಚರಣೆ

ದಾವಣಗೆರೆ, ಮೇ 26- ಕೋವಿಡ್ ಸಂದರ್ಭದಲ್ಲಿ ಅದ್ಧೂರಿ ಹುಟ್ಟುಹಬ್ಬದ ಬದಲಾಗಿ, ವಾರ್ಡ್ ಸ್ವಚ್ಛಗೊಳಿಸಿ ನಾಗರಿಕರ ಆರೋಗ್ಯ ಕಾಪಾಡುವಲ್ಲಿ ವಿಶೇಷ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ಹಬೆ ಯಂತ್ರಗಳನ್ನು ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ 38ನೇ ವಾರ್ಡ್ ನಗರ ಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ತಮ್ಮ ಅಕಾಲಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡುವ ಸಲಹೆಯನ್ನು ತಿರಸ್ಕರಿಸಿ, ಸದಾ  ನಾಗರಿಕರಿಗೆ ಸೇವೆ ಒದಗಿಸುವ ಪೌರ ಕಾರ್ಮಿಕರಿಗೆ ಹಬೆ ಯಂತ್ರಗಳನ್ನು ನೀಡುವ ಕಾರ್ಯಕ್ರಮ ನಿಲ್ಲಬಾರದು ಎಂದು ತಮ್ಮ ಅನುಪಸ್ಥಿತಿಯಲ್ಲಿ ಇಂದು ವಿತರಣೆ ಮಾಡಲಾ ಯಿತು. ತಮ್ಮ ವಾರ್ಡ್ ಪೌರ ಕಾರ್ಮಿಕರಿಗೆ ಅಷ್ಟೇ ಅಲ್ಲದೆ, ಸಿದ್ದವೀರಪ್ಪ ಬಡಾವಣೆ,  ಆಂಜ ನೇಯ ಬಡಾವಣೆಯ ಪೌರ ಕಾರ್ಮಿಕರಿಗೂ ಹಬೆ ಯಂತ್ರಗಳನ್ನು ವಿತರಣೆ ಮಾಡಲಾಯಿತು.

ವಾರ್ಡ್ ನಾಗರಿಕರು ಹಾಗೂ ಜಿಎಸ್‍ಎಂ ಸ್ನೇಹ ಬಳಗದವರು ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡು ಸಸಿ ನೆಟ್ಟು, ಪೌರ ಕಾರ್ಮಿಕರನ್ನು ಸನ್ಮಾನಿಸಿ ಹಬೆ ಯಂತ್ರಗಳನ್ನು ನೀಡಲಾಯಿತು. ಅಲ್ಲದೇ, ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಲಘು ಉಪಹಾರ ನೀಡುವ ಮೂಲಕ ಸರಳ  ಹಾಗೂ ಅರ್ಥ ಪೂರ್ಣವಾಗಿ ಗಡಿಗುಡಾಳ್ ಮಂಜುನಾಥ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರಾದ ಕೆ. ಚಮನ್ ಸಾಬ್, ಪಾಮೇನಹಳ್ಳಿ ನಾಗರಾಜ್, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್, ಮುಖಂಡರುಗಳಾದ ಇಟ್ಟಿಗುಡಿ ಮಂಜುನಾಥ್, ಹುಲ್ಮನೆ ಗಣೇಶ್, ಆಶಾ ಉಮೇಶ್, ಸ್ಥಳೀಯರಾದ ಪ್ರಮೋದ್, ವಿವೇಕ್, ಪ್ರಜ್ವಲ್, ಜ್ಯೋತಿರ್ಲಿಂಗ, ನಿಖಿಲ್, ಉಮೇಶ್, ಮನೋಜ್, ಮನೀಶ್, ಸತೀಶ್, ಮನು, ನವೀನ್, ರಕ್ಷಿತ್, ದೇವೇಂದ್ರಪ್ಪ, ನೀಲಕಂಠಪ್ಪ, ರಾಜು, ಮುರುಗೇಶ್, ನಿತಿನ್, ಕೃಷ್ಣಪ್ಪ, ಬಸಣ್ಣ, ಮಂಜುನಾಥ್, ಮಟ್ಟಿಕಲ್ ಮಂಜುನಾಥ್, ಶೌಕತ್ ಆಲಿ,ಮುರುಗೇಶ್, ಮಹಾಬಲೇಶ್, ಪ್ರಸನ್ನ, ಬಸವರಾಜ್, ಬಸವನ ಗೌಡ್ರು, ಪ್ರಭುಸ್ವಾಮಿ ಸೇರಿದಂತೆ ಇತರರಿದ್ದರು.

error: Content is protected !!