ಕೆಎಸ್ಸಾರ್ಟಿಸಿಯಿಂದ ಸಂಚಾರಿ ಆಕ್ಸಿಜನ್ ಬಸ್ ಒದಗಿಸಲು ಆಗ್ರಹ

ಕೆಎಸ್ಸಾರ್ಟಿಸಿಯಿಂದ ಸಂಚಾರಿ ಆಕ್ಸಿಜನ್ ಬಸ್ ಒದಗಿಸಲು ಆಗ್ರಹ - Janathavaniದಾವಣಗೆರೆ,ಮೇ 23- ಕೋವಿಡ್ ಸೋಂಕಿತರಿಗೆ ಆಗುತ್ತಿರುವ ಬೆಡ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸಂಚಾರಿ ಆಕ್ಸಿಜನ್ ಬಸ್ಸುಗಳನ್ನು ಒದಗಿಸುವಂತೆ ಜಿಲ್ಲಾ ಜೆಡಿಎಸ್ ಮುಖಂಡರುಗಳಾದ ಎಂ.ಎನ್. ನಾಗರಾಜ್ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಕೆಎಸ್ಸಾರ್ಟಿಸಿಯಿಂದ ಸಂಚಾರಿ ಆಕ್ಸಿಜನ್ ಬಸ್ಸುಗಳನ್ನು ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಒದಗಿಸಲಾಗಿದ್ದು, ನಗರದಲ್ಲೂ ಈ ವ್ಯವಸ್ಥೆಯನ್ನು ಕೂಡಲೇ ಮಾಡುವುದರ ಮೂಲಕ ಕೋವಿಡ್ ಸೋಂಕಿತರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಜಿಲ್ಲಾಧಿಕಾರಿಗಳನ್ನು ಕೇಳಿಕೊಂಡಿದ್ದಾರೆ.

ಜಿಲ್ಲೆಯ ಜನಪ್ರತಿನಿಧಿಗಳು, ಎಸ್ಪಿ, ಡಿಸಿ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸುತ್ತಿದ್ದು ಶ್ಲ್ಯಾಘನೀಯ ಎಂದಿರುವ ನಾಗರಾಜ್, ಸಂಚಾರಿ ಆಕ್ಸಿಜನ್ ಬಸ್ಸುಗಳನ್ನು ಒದಗಿಸಿದ್ದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

error: Content is protected !!