ದಾವಣಗೆರೆ, ಮೇ 23- ಕೋವಿಡ್ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಶಾಲೆಗಳಿಗೆ ಹಾಗೂ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಜಿಲ್ಲಾ ಶಾಶ್ವತ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಸಂಘ ಸರ್ಕಾರವನ್ನು ಒತ್ತಾಯಿ ಸಿದೆ. ರಾಜಧಾನಿಯಲ್ಲಿರುವ ಕೆಲವು ಹೈಟೆಕ್ ಶಾಲೆಗಳನ್ನು ಗಮನದಲ್ಲಿ ಟ್ಟುಕೊಂಡು, ಸಚಿವರು ಕೊಡುತ್ತಿರುವ ಹೇಳಿಕೆಗಳು ಇಡೀ ರಾಜ್ಯದ ಸಣ್ಣಪುಟ್ಟ, ಮಧ್ಯಮ ವರ್ಗದ ಶಾಲೆಗಳು ಚಿಂತಾಜನಕ ಸ್ಥಿತಿಗೆ ಬರು ವಂತೆ ಆಗಿದೆ. ಲಕ್ಷಾಂತರ ಶಿಕ್ಷಕರು ಬೀದಿ ಪಾಲಾಗಿದ್ದಾರೆ. ಕೆಲವರು ವಿವಿಧ ಉದ್ಯೋಗಗಳನ್ನು ಅರಸಿ ಹೋದರೆ, ಕೆಲ ಶಿಕ್ಷಕರು ಪರಿಸ್ಥಿತಿ ಅರಗಿಸಿಕೊಳ್ಳಲು ಆಗದೇ ಕಂಗಾಲಾಗಿದ್ದಾರೆ ಎಂದು ಅಧ್ಯಕ್ಷ ತ್ಯಾವಣಿಗಿ ವೀರಭದ್ರಸ್ವಾಮಿ, ಗೌರವಾಧ್ಯಕ್ಷ ಕಂದನಕೋವಿ ಪ್ರಕಾಶ್ ತಿಳಿಸಿದ್ದಾರೆ.
July 24, 2024