18 ರಂದು ನೀಲಾನಹಳ್ಳಿ ಆಂಜನೇಯ ರಥೋತ್ಸವ

18 ರಂದು ನೀಲಾನಹಳ್ಳಿ ಆಂಜನೇಯ ರಥೋತ್ಸವ - Janathavaniದಾವಣಗೆರೆ, ಮಾ. 14 – ತಾಲ್ಲೂಕಿನ ನೀಲಾನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಇದೇ ದಿನಾಂಕ 18 ರ ಗುರುವಾರ ಬೆಳಿಗ್ಗೆ 8.30 ಕ್ಕೆ ಜರುಗಲಿದೆ ಹಾಗೂ ಸಂಜೆ ಕಾರಣಿಕ ನಡೆಯಲಿದೆ ಎಂದು ದೇವಸ್ಥಾನದ ಕನ್ವೀನರ್ ಡಾ. ಎನ್.ಎಂ. ಆಂಜನೇಯ ಗುರೂಜಿ ತಿಳಿಸಿದ್ದಾರೆ. 

ಕಾರ್ಯಕ್ರಮದ ಅಂಗವಾಗಿ ಇದೇ ದಿನಾಂಕ 16ರ ಮಂಗಳವಾರ ರಾತ್ರಿ 9.10 ಕ್ಕೆ ಆಂಜನೇಯ ಸ್ವಾಮಿಗೆ ಕಂಕಣಧಾರಣೆ ನಡೆಯಲಿದೆ. 17ರ ಬುಧವಾರ ಸಂಜೆ ದೊಡ್ಡಬಾತಿಯ ಶ್ರೀ ಬೀರಲಿಂಗೇಶ್ವರ ದೇವರು ಆಗಮಿಸುವರು ಹಾಗೂ ರಾತ್ರಿ ಅರಿಶಿಣ ಎಣ್ಣೆ ಕಾರ್ಯ ನಡೆಯಲಿದೆ. ದಿನಾಂಕ 18 ರ ಗುರುವಾರ ಬೆಳಿಗ್ಗೆ 8.30ಕ್ಕೆ ರಥೋತ್ಸವ ಜರುಗಲಿದ್ದು, ನಂತರ 9.30 ರಿಂದ 1.30 ರವರೆಗೆ ಭಕ್ತಾದಿಗಳು ಹರಕೆ ತೀರಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30 ಕ್ಕೆ ಬೇಟೆ ಆಡುವುದು, 5.30 ಕ್ಕೆ ಮುಳ್ಳು ಗದ್ದಿಗೆ, 6.30 ಕ್ಕೆ ಕಾರಣಿಕ ಮತ್ತು 7.30 ಕ್ಕೆ ಭೂತ ಸೇವೆ, ರಾತ್ರಿ 8.30 ಕ್ಕೆ ಓಕಳಿ ಕಾರ್ಯ, 9.30 ಕ್ಕೆ ಗಂಗಾ ಪೂಜೆಯೊಂದಿಗೆ ರಥೋತ್ಸವ ಪೂರ್ಣಗೊಳ್ಳಲಿದೆ. 

error: Content is protected !!