ಕಲಾವಿದರಿಗೆ ಪ್ಯಾಕೇಜ್ ಘೋಷಣೆ ಸ್ವಾಗತಾರ್ಹ

ದಾವಣಗೆರೆ, ಮೇ 19- ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರವು ಲಾಕ್ ಡೌನ್‌ನಂತಹ ಬಿಗಿ ಕ್ರಮಗಳನ್ನು ಕೈಗೊಂಡಿರುವುದು ಸರಿಯಾಗಿಯೇ ಇದೆ. ಆದರೆ, ಈ ಕಠಿಣ ಕ್ರಮಗಳಿಂದ ಅನೇಕ ಅಸಂಘಟಿತ ವಲಯದಲ್ಲಿನ ಕಾರ್ಮಿಕರು, ವಿವಿಧ ಕಲಾ ತಂಡಗಳ ಕಲಾವಿದರು ತಮ್ಮ ದೈನಂದಿನ ಜೀವನವನ್ನು ಸಾಗಿಸಲು ಆಗದಂತಹ ಕಷ್ಟದಲ್ಲಿದ್ದಾರೆ. ಇದನ್ನು ಮನಗಂಡು ರಾಜ್ಯ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜಿನಲ್ಲಿ ರಾಜ್ಯದ ಒಟ್ಟು 16095 ವಿವಿಧ ಕಲಾವಿದರಿಗೆ ಮತ್ತು ಕಲಾ ತಂಡದವರಿಗೆ ತಲಾ 3000 ರೂ.ಗಳಂತೆ 4.82 ಕೋಟಿ ರೂ.ಗಳನ್ನು ನೀಡಲು ಉದ್ದೇಶಿಸಿರುವುದು ಬಡ ಕಲಾವಿದರ ಜೀವನೋಪಾಯಕ್ಕೆ ಆಸರೆಯಾದಂತೆ ಆಗಿದೆ  ಎಂದು ಕನ್ನಡಪರ ಚಿಂತಕ, ಲೇಖಕ ಬಸವಾಪಟ್ಟಣ ಎಲ್.ಜಿ.ಮಧುಕುಮಾರ್ ತಿಳಿಸಿದರು.

error: Content is protected !!