ಹೆಸರಿನಂತೆ ಬಸವಣ್ಣನವರ ಆಡಳಿತ ನೀಡಿ : ಆನಂದರಾಜ್

ಹೆಸರಿನಂತೆ ಬಸವಣ್ಣನವರ ಆಡಳಿತ ನೀಡಿ : ಆನಂದರಾಜ್ - Janathavaniದಾವಣಗೆರೆ, ಜು. 29- ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹೆಸರಿನಂತೆ ಹನ್ನೆರಡನೇ ಶತಮಾನದ ಬಸವಣ್ಣನವರ ಮಾದರಿ ಆಡಳಿತ ನೀಡುವಂತಾಗಲಿ ಎಂದು ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್ ಅವರು ಆಶಿಸಿದ್ದಾರೆ.

ಬಸವಣ್ಣ ಮತ್ತು ಕನಕದಾಸರ ನಾಡಿನಲ್ಲಿ ಹುಟ್ಟಿ ಬೆಳೆದು ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಯಿಯವರು, ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಬೇಕು. ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿದ್ದವರನ್ನು ಕೈ ಬಿಟ್ಟು ಇನ್ನುಳಿದ ತುಳಿತಕ್ಕೆ ಒಳಗಾದ ಸಮುದಾಯದವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಜನಪರ ಆಡಳಿತ ನೀಡಲೆಂದು ಆನಂದರಾಜ್ ಅವರು ಸಲಹೆ ನೀಡಿದ್ದಾರೆ.  ದಾವಣಗೆರೆ ಜಿಲ್ಲೆಯವರೊಬ್ಬರಿಗೆ ಮಂತ್ರಿ ಸ್ಥಾನ ನೀಡುವಂತೆಯೂ ಅವರು  ಒತ್ತಾಯಿದ್ದಾರೆ.

error: Content is protected !!