ನಗರದ ತಾಜ್‌ ಪ್ಯಾಲೇಸ್ ಅನ್ನು ಕೋವಿಡ್ ಸೆಂಟರ್‌ನ್ನಾಗಿಸಲು ಸಭೆ

ದಾವಣಗೆರೆ, ಮೇ 18- ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಅನುಕೂಲವಾಗಲು ನಗರದ ತಾಜ್‌ ಪ್ಯಾಲೇಸ್‌ ಅನ್ನು ಕೋವಿಡ್ ಸೆಂಟರ್‌ ಮಾಡುವ ನಿಟ್ಟಿನಲ್ಲಿ ಇಂದು ನಡೆದ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೈಯದ್ ಚಾರ್ಲಿ, ಕೆ.ಚಮ್ಮನ್ ಸಾಬ್, ಜಾಕೀರ್, ಸಿರಾಜ್, ದಾದಾಪೀರ್, ಘನಿ ತಾಹೀರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!