ವೈರಸ್ ತಡೆಯಲು ರಾಸಾಯನಿಕ ಔಷಧಿ ಸಿಂಪರಣೆ

ಜಗಳೂರು, ಮೇ 18- ಕೋವಿಡ್-19 ಸೋಂಕು ನಿಯಂತ್ರಣಕ್ಕೆ  ಪಟ್ಟಣ ಪಂಚಾಯಿತಿ  ವತಿಯಿಂದ ಪಟ್ಟಣದ 18 ವಾರ್ಡ್‌ಗಳಲ್ಲಿ ರಾಸಾಯನಿಕ ಕ್ರಿಮಿನಾಶಕವನ್ನು ಅಗ್ನಿಶಾಮಕ ಠಾಣೆ ವಾಹನಗಳಿಂದ ಸಿಂಪರಣೆ ಮಾಡಲಾಗುತ್ತಿದೆ.

 ಸಾಂಕ್ರಾಮಿಕ ರೋಗ  ಹರಡದಂತೆ ಮುಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಸಾರ್ವಜನಿಕರಿಗೆ ತಿಳಿಸಿದರು.  ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಮಾತನಾಡಿದರು.  ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಹನುಮಂತರಾಯ,  ಪಂಚಾಯ್ತಿ ಕಂದಾಯ ನಿರೀಕ್ಷಕ ಸಂತೋಷ್ ಕುಮಾರ್, ಆರೋಗ್ಯ ನಿರೀಕ್ಷಕ ಕಿಫಾಯತ್ ಮತ್ತಿತರರು ಇದ್ದರು.

error: Content is protected !!