ಕೇಂದ್ರದ ಮಾಜಿ ಸಚಿವ ಅಜಿತ್ ಸಿಂಗ್ ನಿಧನಕ್ಕೆ ಪ್ರೊ. ನರಸಿಂಹಪ್ಪ ಸಂತಾಪ

ದಾವಣಗೆರೆ,ಮೇ 7- ನಿನ್ನೆ ನಿಧನರಾದ ಮಾಜಿ ಕೇಂದ್ರ ಸಚಿವ ಹಾಗೂ ಆರ್.ಎಲ್.ಡಿ. ನಾಯಕ ಅಜಿತ್ ಸಿಂಗ್ ಅವರಿಗೆ ಭಾರತೀಯ ರೈತ ಒಕ್ಕೂಟದ  ಅಧ್ಯಕ್ಷ ಪ್ರೊ. ಸಿ. ನರಸಿಂಹಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಜಿತ್ ಸಿಂಗ್ ಅವರ ವ್ಯಕ್ತಿತ್ವ ಮತ್ತು ರಾಜಕೀಯ ಕ್ಷೇತ್ರದ ಮೂಲಕ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಮೆಲುಕು ಹಾಕಿರುವ ನರಸಿಂಹಪ್ಪ, ಅಜಿತ್ ಸಿಂಗ್ ಕೇಂದ್ರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಕರ್ನಾಟಕಕ್ಕೆ ಅತೀ ಹೆಚ್ಚು ಸಕ್ಕರೆ ಕಂಪನಿಗಳನ್ನು ಮಂಜೂರು ಮಾಡಿದ್ದರು. ಈ ಮೂಲಕ ರಾಜ್ಯದಲ್ಲಿ 63 ಸಕ್ಕರೆ ಕಾರ್ಖಾನೆಗಳಿದ್ದು, ಇದರಿಂದ ಅತೀ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಭಾರತದ ಮೂರನೇ ರಾಜ್ಯ  ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಪುತ್ರ ಮತ್ತು ರೈತ ಮುಖಂಡರಾಗಿದ್ದ ಅಜಿತ್ ಸಿಂಗ್ ತಮ್ಮ ಆತ್ಮೀಯ ಒಡನಾಡಿಗಳಲ್ಲೊಬ್ಬರಾಗಿದ್ದರು ಎಂದು ನರಸಿಂಹಪ್ಪ ಅವರು ಅಜಿತ್ ಸಿಂಗ್ ಅವರೊಂದಿಗಿನ ಬಾಂಧವ್ಯವನ್ನು ಮೆಲುಕು ಹಾಕಿದ್ದಾರೆ.

error: Content is protected !!