ಹೊನ್ನಾಳಿ: ಸಿಡಿಲು ಬಡಿದು ಸಾವು

ಹೊನ್ನಾಳಿ, ಮೇ 4- ತಾಲ್ಲೂಕಿನ ಮಾದೇನಹಳ್ಳಿ ಜಮೀನಿನಲ್ಲಿ ಕುರಿ ಕಾಯುತ್ತಿದ್ದ ವ್ಯಕ್ತಿಗೆ ಸಿಡಿಲು ಬಡಿದು ಸಾವಿಗೀಡಾಗಿರುವ ಘಟನೆ ಇಂದು ಸಂಜೆ 5 ಗಂಟೆಗೆ ನಡೆದಿದೆ. ಶಿರ ತಾಲ್ಲೂಕು ಚಿತ್ರಲಿಂಗಯ್ಯ (24) ಎನ್ನುವ ವ್ಯಕ್ತಿ ಸಾವಿಗೀಡಾಗಿದ್ದು, ಈತ ಮೊಬೈಲ್ ಬಳಸುತ್ತಿದ್ದ ಕಿವಿಗೆ ಸಿಡಿಲು ಬಡಿದು ನಂತರ  ಇಡೀ ದೇಹಕ್ಕೆ  ಹಾನಿ ಮಾಡಿದೆ.

ಗ್ರಾಮದ ನಾಗರಾಜಪ್ಪ ಎಂಬುವವರ ಜಮೀನಿನಲ್ಲಿ ಸುಮಾರು 200 ಕುರಿಗಳ ಹಿಂಡು ಕಾಯುತ್ತಿದ್ದು, ಜೊತೆಗಿದ್ದ ಮತ್ತೊಬ್ಬನಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂಬುದಾಗಿ ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಿಸಿದ ಎಸ್.ಐ.ಬಸವನಗೌಡ ದೂರು ದಾಖಲಿಸಿಕೊಂಡಿದ್ದಾರೆ.

error: Content is protected !!