ಕೊಟ್ಟೂರಿಗೆ ಪಾದಯಾತ್ರೆ ನಿಷೇಧ

ದಾವಣಗೆರೆ, ಮಾ.5-  ಕಂಚಿಕೇರಿಯಿಂದ ಅರಸೀಕೆರೆವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು,  ಕೊಟ್ಟೂರು ಪಾದಯಾತ್ರಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಅಲ್ಲದೇ ಆರೋಗ್ಯದ ಹಿತ ದೃಷ್ಟಿಯಿಂದ ಕೋವಿಡ್ ಹರಡ ದಂತೆ ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ ಜಿಲ್ಲಾಧಿಕಾರಿಗಳು ಹಾಗೂ ದಂಡಾಧಿಕಾರಿಗಳು ನಾಳೆ ದಿನಾಂಕ 6 ರಿಂದ 7 ರವರೆಗೆ ಭಕ್ತಾದಿಗಳ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಐರಣಿ ಶೆಟ್ರು ಮುರುಘರಾಜೇಂದ್ರ ಅವರು ತಿಳಿಸಿದ್ದಾರೆ.

error: Content is protected !!