ಹಾಸ್ಟೆಲ್ ಸಮೀಪದ ಮದ್ಯದಂಗಡಿ ತೆರವಿಗೆ ಆದೇಶ

ಜಗಳೂರು, ಜು.21- ತಾಲ್ಲೂಕಿನ ಬಿದರಕೆರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮೆಟ್ರಿಕ್‌ ಪೂರ್ವ ಅಂಬೇಡ್ಕರ್ ವಸತಿಯುತ ವಿದ್ಯಾರ್ಥಿ ನಿಲಯದ ಬಳಿ ಇರುವ ಮದ್ಯದ ಅಂಗಡಿ ಯನ್ನು ತೆರವುಗೊಳಿಸು ವಂತೆ ಬಾರ್ ಮಾಲೀಕರಿಗೆ ತಹಶೀಲ್ದಾರ್ ಡಾ. ನಾಗವೇಣಿ ಸೂಚನೆ ನೀಡಿದರು.

ಪೊಲೀಸ್ ಅಧಿಕಾರಿಗಳು ಹಾಗೂ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನಾಗವೇಣಿ ಅವರು ಈ ನಿರ್ದೇಶನ ನೀಡಿದ್ದಾರೆ.  

ವಿದ್ಯಾರ್ಥಿ ನಿಲಯದ ಬಳಿ ಇರುವ ಮದ್ಯದ ಅಂಗಡಿ  ಹಾಗೂ ಎಗ್‍ರೈಸ್ ಅಂಗಡಿಗಳಿಂದ ಮಕ್ಕಳಿಗೆ ತೊಂದರೆಯಾಗಿದ್ದು, ಸಮಸ್ಯೆ ಉಂಟಾಗಿರುವ  ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕ್ರಮ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್, ಪಿಎಸ್‍ಐ ಸಂತೋಷ್‌ ಬಾಗೋಜಿ, ವಸತಿ ಶಾಲೆಯ ಪ್ರಾಂಶುಪಾಲ ರವಿಕುಮಾರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮರುಳಸಿದ್ದಪ್ಪ ಇನ್ನಿತರರಿದ್ದರು. 

error: Content is protected !!