ಲಯನ್ಸ್ ಕ್ಲಬ್ ನಿಂದ ಆಹಾರ ವಿತರಣೆ

ದಾವಣಗೆರೆ, ಮೇ 2 – ಲಯನ್ಸ್ ಕ್ಲಬ್ ವತಿಯಿಂದ ಆಹಾರ ಪೊಟ್ಟಣ ಗಳನ್ನು ಲಯನ್ಸ್ ಕ್ಲಬ್ ಹಿರಿಯ ಸದಸ್ಯರುಗಳಾದ ಬೆಳ್ಳೂಡಿ ಶಿವಕುಮಾರ್,  ಮಹಾತೇಶ್ ವಿ. ಒಣರೊಟ್ಟಿ ಅವರುಗಳ ನೇತೃತ್ವ  ಮತ್ತು  ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ ಅವರ ಅಧ್ಯಕ್ಷತೆಯಲ್ಲಿ ಬಾಪೂಜಿ ಆಸ್ಪತ್ರೆಯ ಹಾಗೂ  ಸಿ.ಜಿ. ಆಸ್ವತ್ರೆಯ ಆವರಣದಲ್ಲಿ ಆಹಾರದ ಪೊಟ್ಟಣ, ನೀರಿನ ಬಾಟಲ್ ಗಳನ್ನು ಆಂಬ್ಯುಲೆನ್ಸ್ ಚಾಲಕರು ಮತ್ತು ಇತರರಿಗೆ ವಿತರಿಸಲಾಯಿತು. 

ಲಯನ್ಸ್ ನಿರ್ದೇಶಕರುಗಳಾದ ಎಸ್.ಕೆ.ಮಲ್ಲಿಕಾರ್ಜುನ್, ಎನ್.ಆರ್. ನಾಗಭೂಷಣರಾವ್,  ಪಿ.ಹೆಚ್.ಗೋವಿಂದ್ ರಾಜ್, ನೀಲಿ ಉಮೇಶ್, ಪಳನಿಸ್ವಾಮಿ, ಲಯನ್ಸ್ ಕ್ಲಬ್ ಮೇನೇಜರ್  ಆರ್. ನಾಗರಾಜ್ ಅವರುಗಳು ಈ ಸೇವಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!