ಮಲೇಬೆನ್ನೂರು-ಜಿಗಳಿ-ಹೊಳೆಸಿರಿಗೆರೆ ಕ್ರಾಸ್‌ವರೆಗಿನ ರಸ್ತೆ ಅಭಿವೃದ್ಧಿಗೆ ಒತ್ತು

ಶಾಸಕ ಎಸ್. ರಾಮಪ್ಪ

ಮಲೇಬೆನ್ನೂರು, ಮಾ.3- ಹಾಲಿವಾಣ ಗ್ರಾಮದಲ್ಲಿ ಈಶ್ವರ ದೇವಸ್ಥಾನದ ಸಮೀಪ ಟಿಎಸ್‌ಪಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಶಾಸಕ ಎಸ್. ರಾಮಪ್ಪ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಅಗತ್ಯ ಕಾಮಗಾರಿ ಗಳಿಗೆ ಹಂತ ಹಂತವಾಗಿ ಅನುದಾನ ನೀಡುತ್ತೇನೆ. ಮಲೇ ಬೆನ್ನೂರು-ಜಿಗಳಿ-ಹೊಳೆಸಿರಿಗೆರೆ ಕ್ರಾಸ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಒತ್ತು ನೀಡುವುದಾಗಿ ಹೇಳಿದರು.

ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜು ನಾಥ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಗ್ರಾ.ಪಂ. ಉಪಾಧ್ಯಕ್ಷೆ ಅಂಜಿತಾ ಸಂತೋಷ್ ಕುಮಾರ್, ಸದ ಸ್ಯರಾದ ಡಿ.ಡಿ. ಚಿಕ್ಕಣ್ಣ, ಇ. ಹಾಲೇಶ್, ರೇಣುಕಮ್ಮ ವಿಜಯಕುಮಾರ್, ಪಿಡಿಒ ರಮೇಶ್, ಪಿಡಬ್ಲ್ಯೂಡಿ ಇಂಜಿನಿಯರ್ ಬಿ.ಜಿ. ಶಿವರುದ್ರಪ್ಪ, ಗುತ್ತಿಗೆದಾರ ಹರಳಹಳ್ಳಿ ಸುರೇಶ್, ಗ್ರಾಮದ ಜಿ.ಕೆ. ಸುರೇಶ್, ಕುಡಪಲಿ ತಿಪ್ಪೇಶ್, ಕೆ. ನಾಗಪ್ಪ, ಎಸ್.ಜಿ. ಮಂಜುನಾಥ್, ಸಂತೋಷ್, ಯಲವಟ್ಟಿ ಕೊಟ್ರೇಶ್ ನಾಯ್ಕ ಇನ್ನಿತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಶಾಸಕ ರಾಮಪ್ಪ ಭಾನುವಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.

error: Content is protected !!