ಹೈಕಮಾಂಡ್ ಸ್ಪಷ್ಟ ಪಡಿಸಿದರೂ ಗೊಂದಲವೇಕೋ

ಹೈಕಮಾಂಡ್ ಸ್ಪಷ್ಟ ಪಡಿಸಿದರೂ ಗೊಂದಲವೇಕೋ - Janathavaniದಾವಣಗೆರೆ, ಜು.18- ಎರಡು ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆ ಯುವರು ಎಂಬುದಾಗಿ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ ಬದಲಾವಣೆ ಗೊಂದಲ ಯಾಕೆ ಬರುತ್ತಿದೆ ಗೊತ್ತಾಗುತ್ತಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಸಿಎಂ ಬಿಎಸ್​ವೈ ಅವರು ಕೊರೊನಾ ವೇಳೆಯಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅವರೇ ನಮ್ಮೆಲ್ಲರ ನಾಯಕರು. ಅವರೇ ಇನ್ನೂ ಎರಡು ವರ್ಷಗಳ ಕಾಲ ಸಿಎಂ ಆಗಿ ಮುಂದು ವರೆಯುತ್ತಾರೆ. ಆದರೆ ಯತ್ನಾಳ್, ಯೋಗೀಶ್ವರ್, ಬೆಲ್ಲದ್ ಒಂದು ವರ್ಷ ದಿಂದಲೇ ಸಿಎಂ ಬದಲಾವಣೆ ವಿಚಾರ ಹೇಳುತ್ತಿದ್ದಾರೆ. ಈ ಮೂವರು ಹೇಳ್ತಾನೇ ಇದ್ದಾರೆ. ಸಿಎಂ ಬದಲಾವಣೆ ಆಗಿ ದೆಯಾ. ಭಗವಂತ ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಟಾಂಗ್ ಕೊಟ್ಟರು.

ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿ, ನೀರಾವರಿ, ಹಣಕಾಸಿನ ವಿಚಾರಕ್ಕೆ ದೆಹಲಿಗೆ ಹೋಗಿದ್ದರು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಮಾಜಿ ಸಿಎಂ ಕುಮಾರಸ್ವಾಮಿ ಹೇಳಿರುವ ಆರು ಬ್ಯಾಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದೇಶ್ವರ ಅವರು,
ಬಟ್ಟೆ ಬರೆ ತೆಗೆದುಕೊಂಡು ಹೋಗಿದ್ದಾರೆ. 

ಅದರಲ್ಲಿ ಹಣ ಇದ್ದಿದ್ದರೆ ಸೀಜ್ ಮಾಡಬಹುದಿತ್ತು. ಇವೆಲ್ಲಾ ಭ್ರಮೆ ಬರುವಂತಹ ಬೋಗಸ್ ಹೇಳಿಕೆ ಎಂದು ಸಿಡಿಮಿಡಿಗೊಂಡರು.

error: Content is protected !!