ಕಸಾಪ ಚುನಾವಣೆ: ಬಂಡಾಯ ಸಾಹಿತ್ಯ ಸಂಘಟನೆ ಯಾರನ್ನು ಬೆಂಬಲಿಸುವುದಿಲ್ಲ

ಕಸಾಪ ಚುನಾವಣೆ: ಬಂಡಾಯ ಸಾಹಿತ್ಯ ಸಂಘಟನೆ ಯಾರನ್ನು ಬೆಂಬಲಿಸುವುದಿಲ್ಲ - Janathavaniಬೆಂಗಳೂರು, ಏ.24 – ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಹಿನ್ನೆಲೆಯಲ್ಲಿ ಒಂದು ಸೈದ್ಧಾಂತಿಕ ಸಂಘಟನೆಯಾಗಿ ಬಂಡಾಯ ಸಾಹಿತ್ಯ ಸಂಘಟನೆ ಯಾರನ್ನೂ ಬೆಂಬಲಿಸುವುದಿಲ್ಲ ಅಥವಾ ಯಾವ ಅಭ್ಯರ್ಥಿಯನ್ನು ವಿರೋಧಿಸುವುದಿಲ್ಲ. ಸೂಕ್ತ ನಿಲುವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಸ್ವಾತಂತ್ರ್ಯ ಸಂಘಟನೆಯ ಎಲ್ಲರಿಗೂ ಇದೆ. ಅದು ಅವರವರಿಗೆ ಬಿಟ್ಟ ವಿಷಯವಾಗಿದೆ ಎಂದು ಬಂಡಾಯ ಸಾಹಿತ್ಯ ಸಂಘಟನೆಯ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

error: Content is protected !!