ತಾ.ಪಂ., ಜಿ.ಪಂ.ಗಳಲ್ಲಿ ಬಿಜೆಪಿ ಗೆಲುವಿಗೆ ಶ್ರಮ ವಹಿಸಬೇಕು : ಎ. ನಾರಾಯಣಸ್ವಾಮಿ

ಚಳ್ಳಕೆರೆ, ಫೆ. 26- ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ   ಬಿಜೆಪಿ ಪಕ್ಷದಿಂದ   ಅತಿ ಹೆಚ್ಚು  ಅಭ್ಯರ್ಥಿಗಳು ಜಯ ಸಾಧಿಸಿದ್ದು, ಅದ ರಂತೆ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಯಲ್ಲಿ ಗೆಲ್ಲುವಂತೆ ಶ್ರಮ ವಹಿಸಬೇಕು ಎಂದು ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ  ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಬಿಜೆಪಿ ಜಿಲ್ಲಾ  ಎರಡನೇ  ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತದ ಪ್ರಧಾನಿ ಮಂತ್ರಿ  ನರೇಂದ್ರ ಮೋದೀಜಿ ಉತ್ತಮವಾದ ಕಾರ್ಯಗಳನ್ನು ಮಾಡು ತ್ತಿದ್ದು, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಇದನ್ನು ಮನ ಗಂಡ  ಜನ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ.

ಅದರಂತೆ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳು ಬರುವುದರಿಂದ  ಬಿಜೆಪಿ ಸರ್ಕಾರ ಮಾಡುತ್ತಿರುವ ಸಾಧನೆಯನ್ನು ಜನರಿಗೆ ತಲುಪಿಸಿ ಅತಿ ಹೆಚ್ಚು  ಸ್ಥಾನ ಗೆಲ್ಲಿಸುವಂತೆ ಕಾರ್ಯನಿರ್ವಹಿಸಬೇಕು ಎಂದರು.

ಚಿತ್ರದುರ್ಗ ಶಾಸಕ ಜಿ.ಹೆಚ್ . ತಿಪ್ಪಾರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಭದ್ರಕೋಟೆ ಯಾಗಿ ಹೊರಹೊಮ್ಮಿ, ಜಿಲ್ಲೆಯಲ್ಲಿ ಐದು ಕಡೆ ಬಿಜೆಪಿ ಶಾಸಕ ರಿದ್ದು, ಚಳ್ಳ ಕೆರೆಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ.  ಬರುವ ವಿಧಾನಸಭೆ ಚುನಾವಣೆಯಲ್ಲಿ ಆರಕ್ಕೆ ಆರು  ತಾಲ್ಲೂಕು ಬಿಜೆಪಿ ಪಕ್ಷದ ಶಾಸಕರು ಆಯ್ಕೆಯಾಗುವಂತೆ ಪ್ರಯತ್ನ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯ ದರ್ಶಿಗಳಾದ ಕೆ. ಎಸ್. ನವೀನ್, ತುಳಸಿ ಮುನಿ ರಾಜು ಗೌಡ್ರು, ರಾಜ್ಯ  ಕಾರ್ಯದರ್ಶಿ , ವಿಭಾಗ ಸಂಘಟನಾ ಕಾರ್ಯದರ್ಶಿ ಜೇಷ್ಠ ಪಡಿವಾಳ್,  ವಿಭಾಗದ ಪ್ರಭಾರಿ ಜಿಎಂ. ಸುರೇಶ್, ಚಿತ್ರದುರ್ಗ ಶಾಸಕ ಜಿ. ಹೆಚ್. ತಿಪ್ಪಾರೆಡ್ಡಿ, ಹೊಸದುರ್ಗ ಶಾಸಕ ರಾದ ಗೂಳಿಹಟ್ಟಿ ಶೇಖರ್ , ಜಿಲ್ಲಾ ಪ್ರಭಾರಿ ಶಂಕ ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ರಾಜೇಶ್ ಬುರುಡೇಕಟ್ಟೆ, ಜಿ.ಟಿ. ಸುರೇಶ್, ಮಾಜಿ ಶಾಸಕ ರಮೇಶ್  ಚಳ್ಳಕೆರೆ, ಮಂಡಲ ಅಧ್ಯಕ್ಷ ಸುರನ ಹಳ್ಳಿ ಶ್ರೀನಿವಾಸ್  ಹಾಗೂ ಜಿಲ್ಲೆಯ ಪದಾಧಿಕಾರಿ ಗಳು, ಜಿಲ್ಲೆಯ ಕಾರ್ಯ ಕಾರಿಣಿ ಸದಸ್ಯರು, ವಿಶೇಷ ಆಹ್ವಾನಿತರು, ಜಿಲ್ಲೆಯ ಮೋರ್ಚಾ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಗಳು, ಮಂಡಲದ  ಅಧ್ಯಕ್ಷರು, ಪ್ರಧಾನ ಕಾರ್ಯದ ರ್ಶಿಗಳು ಮತ್ತು ಪ್ರಕೋಷ್ಠದ ಜಿಲ್ಲಾ ಸಂಚಾಲಕರು ಮತ್ತು ಸಹ ಸಂಚಾಲಕರು ಉಪಸ್ಥಿತರಿದ್ದರು.

error: Content is protected !!