ನದಿ ಸ್ನಾನಕ್ಕೆ ಹೋದ ವ್ಯಕ್ತಿ ಸಾವು

ಹರಿಹರ, ಏ.25- ನದಿಯಲ್ಲಿ ಸ್ನಾನ ಮಾಡಲು ಹೋದ ವೇಳೆ ನೀರಿನಲ್ಲಿ ಮುಳುಗಿ ಯುವಕನೋರ್ವ ಸಾವಿಗೀಡಾಗಿರುವ ಘಟನೆ ಇಲ್ಲಿನ ಹಳೇ ಹರ್ಲಾಪುರದ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.

ದಾವಣಗೆರೆಯ ದೇವರಾಜ ಅರಸು ಬಡಾವಣೆ ನಿವಾಸಿ ಸುನೀಲ್‌ ಕುಮಾರ್‌ (33) ಸಾವಿಗೀಡಾದ ಯುವಕ. ಹೋಟೆಲ್‌ ನಡೆಸಿಕೊಂಡು ಜೀವನ ನಡೆಸುತ್ತಿದ್ದ ಈತ ಹರ್ಲಾಪುರದ ತನ್ನ ಮಾವನ ಮನೆಗೆ ಹೋದಾಗ ಸ್ನಾನಕ್ಕೆಂದು ನದಿಗಿಳಿದಾಗ, ಆಳವಾದ ಗುಂಡಿ ಇರುವ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

error: Content is protected !!